ಉದಯವಾಹಿನಿ, ಹಾಸ್ಯ ನಟ ಚಿಕ್ಕಣ್ಣ ಸೀಕ್ರೆಟಾಗಿ ಮದ್ವೆ ನಿಶ್ಚಯ ಮಾಡಿಕೊಂಡು ಸುದ್ದಿಯಾಗಿದ್ರು. ಇತ್ತೀಚೆಗಷ್ಟೇ ಹೂ ಮುಡಿಸುವ ಶಾಸ್ತ್ರವೂ ನಡೆದು ಫೋಟೋಗಳು ವೈರಲ್ ಆಗಿದ್ದವು. ಇತ್ತ ʻಜೋಡೆತ್ತುʼ ಸಿನಿಮಾ ಚಿತ್ರಕ್ಕೆ ಸಿದ್ಧತೆ ಮಾಡಿಕೊಂಡಿರುವ ಚಿಕ್ಕಣ್ಣ ಮತ್ತೊಂದು ಕಡೆ ಮದ್ವೆ ತಯಾರಿ ಕೂಡ ನಡೆಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದ್ರೆ ಸಿನಿಮಾ ಚಿತ್ರೀಕರಣ ಮುಗಿಯುವ ಹೊತ್ತಿಗೆ ನನ್ನ ಮದ್ವೆ ಕೂಡ ಆಗಿರುತ್ತೆ ಅಂದಿದ್ದಾರೆ ಚಿಕ್ಕಣ್ಣ.
ಹೌದು. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಮಹದೇವಪುರ ಗ್ರಾಮದ ಹುಡುಗಿ ಪಾವನಾರನ್ನ ಚಿಕ್ಕಣ್ಣ ವರಿಸಲಿದ್ದು ಇದು ಅರೇಂಜ್‌ ಮ್ಯಾರೇಜ್ ಎಂದಿದ್ದಾರೆ. ಶೀಘ್ರದಲ್ಲೇ ಮದುವೆಯ ದಿನಾಂಕ ಫಿಕ್ಸ್ ಆಗಲಿದೆ. ಜೋಡೆತ್ತು ನಿರ್ಮಾಪಕರ ಕಾಲ್ಗುಣದಿಂದ ನಮಗೂ ಜೋಡೆತ್ತು ಸಿಕ್ಕಿದೆ. ಡೈರೆಕ್ಟರ್ ಕೂಡ ಮದುವೆಯಾದ್ರು. ಈಗ ನಾನು ಮದುವೆಯಾಗುತ್ತಿದ್ದೇನೆ. ಜೋಡೆತ್ತು ಸಿನಿಮಾ ಚಿತ್ರೀಕರಣದ ಮುಗಿಯೋ ಹೊತ್ತಿಗೆ ನನ್ನ ಮದುವೆಯೂ ಆಗಿರುತ್ತೆ ಎಂದಿದ್ದಾರೆ ಚಿಕ್ಕಣ್ಣ.

ಕಾಮಿಡಿ ಸ್ಟಾರ್ ಚಿಕ್ಕಣ್ಣ ಫುಲ್‌ ಫ್ಲೆಜ್ಡ್ ಹೀರೋ ಆಗಿ ಉಪಾಧ್ಯಕ್ಷ ಸಿನಿಮಾದ ಮೂಲಕ ಭಡ್ತಿ ಪಡೆದಿದ್ದರು. ಇದೀಗ ಇನ್ನೊಂದು ಹೊಸ ಚಿತ್ರವೂ ಪ್ರಾರಂಭವಾಗಿದೆ. ಭೂಮಿ ಫಲ ಕೊಡಲು ಉಳುಮೆಗೆ ಜೋಡೆತ್ತು ಬೇಕು. ಬದುಕಿನ ಬಂಡಿ ಸಾಗಲೂ ಪತಿ-ಪತ್ನಿ ಜೋಡೆತ್ತಿನಂತೆ ಸಾಗಬೇಕು. ಹೀಗಾಗಿ ವೃತ್ತಿಯಲ್ಲೂ ವೈಯಕ್ತಿಕವಾಗಿಯೂ ಜೋಡೆತ್ತಿನ ಜೊತೆ ಪ್ರಯಾಣ ಮಾಡುತ್ತಿದ್ದಾರೆ ಚಿಕ್ಕಣ್ಣ.

Leave a Reply

Your email address will not be published. Required fields are marked *

error: Content is protected !!