ಉದಯವಾಹಿನಿ, ರಂಗಕಲಾವಿದ, ನಟ ರಾಜು ತಾಳಿಕೋಟೆ ಅವರು ನಿಧನ ಹೊಂದಿದ್ದರು. ಇಂದು ಅವರ ಹುಟ್ಟೂರಿನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹಲವಾರು ಮಂದಿ ನಟರು ಅವರ ಅಂತಿಮ ದರ್ಶನ ಪಡೆದಿದ್ದಾರೆ. ರಾಜು ತಾಳಿಕೋಟೆ ಜೊತೆಗೆ ಕೆಲವಾರು ನಾಟಕಗಳಲ್ಲಿ ನಟಿಸಿದ್ದ ಉಮಾಶ್ರೀ ಅವರು ಇಂದು ಅಂತಿಮ ದರ್ಶನ ಪಡೆದಿದ್ದು, ರಾಜು ಅವರ ಬಗ್ಗೆ ಮಾತನಾಡಿದರು. ಇಬ್ಬರೂ ಒಟ್ಟಿಗೆ ನಟಿಸಿದ ನಾಟಕಗಳನ್ನು ನೆನಪು ಮಾಡಿಕೊಂಡರು. ನಾಟಕ ಕಂಪೆನಿ ಮಾಲೀಕನಾಗಿ ಬೆಳೆದಿದ್ದನ್ನು ನೆನಪು ಮಾಡಿಕೊಂಡರು. ರಾಜು ತಾಳಿಕೋಟೆ ನನ್ನ ಸಹೋದರ ಎಂದರು ಉಮಾಶ್ರೀ.
