ಉದಯವಾಹಿನಿ, ಪಹಲ್ಗಾಮ್‌ ಭಯೋತ್ಪಾದಕ ದಾಳಿ, ದೆಹಲಿ ಸ್ಫೋಟದಲ್ಲಿ ಮೃತಪಟ್ಟವರಿಗೆ ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್‌ ಖಾನ್‌ ಗೌರವ ನಮನ ಸಲ್ಲಿಸಿದ್ದಾರೆ. ಗ್ಲೋಬಲ್ ಪೀಸ್ ಆನರ್ಸ್ 2025 ಕಾರ್ಯಕ್ರಮದಲ್ಲಿ ಶಾರುಖ್‌ ಖಾನ್‌ ಭಾಗವಹಿಸಿದ್ದರು. 26/11 ಭಯೋತ್ಪಾದಕ ದಾಳಿ, ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಇತ್ತೀಚಿನ ದೆಹಲಿ ಸ್ಫೋಟದಲ್ಲಿ ಪ್ರಾಣ ಕಳೆದುಕೊಂಡ ಮುಗ್ಧ ಜನರಿಗೆ ನನ್ನ ವಿನಮ್ರ ಶ್ರದ್ಧಾಂಜಲಿ. ಈ ದಾಳಿಗಳಲ್ಲಿ ಹುತಾತ್ಮರಾದ ನಮ್ಮ ಧೈರ್ಯಶಾಲಿ ಭದ್ರತಾ ಸಿಬ್ಬಂದಿಗೆ ಗೌರವಯುತ ನಮನ ಎಂದು ಶಾರುಖ್‌ ತಿಳಿಸಿದ್ದಾರೆ.
ಮಾನವೀಯತೆಗೆ ಪ್ರತಿಯೊಬ್ಬರೂ ಬದ್ಧರಾಗಬೇಕು. ಭಾರತೀಯ ಸೈನಿಕರು ಮಾಡಿದ ತ್ಯಾಗಗಳನ್ನು ನಾವು ಗೌರವಿಸಬೇಕು ಎಂದು ನಟ ತಿಳಿಸಿದ್ದಾರೆ. ನಾವೆಲ್ಲರೂ ಒಟ್ಟಾಗಿ ಶಾಂತಿಯತ್ತ ಹೆಜ್ಜೆ ಹಾಕೋಣ. ನಮ್ಮ ಸುತ್ತಲಿನ ಜಾತಿ, ಧರ್ಮ ಮತ್ತು ತಾರತಮ್ಯವನ್ನು ಮರೆತು ಮಾನವೀಯತೆಯ ಹಾದಿಯಲ್ಲಿ ನಡೆಯೋಣ.

Leave a Reply

Your email address will not be published. Required fields are marked *

error: Content is protected !!