ಉದಯವಾಹಿನಿ, ಚಿಕ್ಕಮಗಳೂರು: ಆಲ್ದೂರು ಸಮಿಪದ ಅರೆನೂರು ಗ್ರಾಮದಲ್ಲಿ ಮನೆಯಲ್ಲಿದ್ದ ಗೃಹಿಣಿಯ ಕತ್ತು ಸೀಳಿ ಕೊಂದು ಪರಾರಿಯಾಗಿದ್ದ ಹಂತಕನನ್ನು 2 ದಿನದ ಬಳಿಕ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಜನಾರ್ದನ ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಗ್ರಾಮದ ತಂದೆ ಮನೆಯ ಹಿಂದೆ ಕೆಲಸ ಮಾಡುವಾಗ ಸಂಧ್ಯಾ (32) ಹತ್ಯೆ ನಡೆದಿತ್ತು. ಪೊಲೀಸರ ತನಿಖೆ ವೇಳೆ ಹತ್ಯೆ ಆರೋಪಿ ಆಕೆಯ ಅತ್ತೆಯ ಮಗನೇ ಎಂದು ತಿಳಿದು ಬಂದಿದೆ. ಇನ್ನೂ ಹಂತಕನ ದಾಳಿಯಿಂದ ರಕ್ತದ ಮಡುವಿನಲ್ಲಿದ್ದ ಸಂಧ್ಯಾ ಜೀವನ್ಮರಣದ ಹೋರಾಟದ ಮಧ್ಯೆ ಗೋಡೆ ಹಿಡಿದು ಏಳಲು ಪ್ರಯತ್ನಿಸಿದ್ದಳು. ಮನೆಯ ಗೋಡೆ ಮೇಲೆ ಆಕೆಯ ಹಸ್ತದ ಗುರುತು ಕೂಡ ಪತ್ತೆಯಾಗಿತ್ತು.
