ಉದಯವಾಹಿನಿ, ವಿಲನ್ ಕೊಟ್ಟ ಟಾಸ್ಕ್ನಲ್ಲಿ ಗಿಲ್ಲಿ ಗೆದ್ದಂತೆ ಕಾಣ್ತಿದೆ. ಕೊನೆಗೂ ಕಾವ್ಯ ಕಣ್ಣಲ್ಲಿ ಕಣ್ಣೀರು ಬರುವಂತೆ ಮಾಡಿದ್ದಾರೆ. ತನ್ನ ಬಗ್ಗೆ ಗಿಲ್ಲಿ ಆಡಿದ ಮಾತನ್ನು ನೆನೆದು ‘ಕಾವು’ ಕಣ್ಣೀರಿಟ್ಟಿದ್ದಾರೆ. ಬಿಗ್ ಬಾಸ್ ಮನೆಗೆ ವಿಲನ್ ಎಂಟ್ರಿ ಕೊಟ್ಟಾಗಿನಿಂದ ಸ್ಪರ್ಧಿಗಳ ವರಸೆಯೇ ಬದಲಾಗಿದೆ. ಊಹಿಸಲಾಗದಂತಹ ಬದಲಾವಣೆಗಳು ಮನೆಯಲ್ಲಿ ಕಂಡುಬರುತ್ತಿವೆ. ಬಿಗ್ ಬಾಸ್ ಮನೆಯ ಫೇಮಸ್ ಜೋಡಿ ಗಿಲ್ಲಿ-ಕಾವು ನಡುವೆ ಬಿರುಕು ಮೂಡಿಸಿದ್ದಾರೆ ವಿಲನ್. ಕಾವ್ಯ ಅಳುವಂತೆ ಮಾಡ್ಬೇಕು ಅಂತ ಗಿಲ್ಲಿಗೆ ವಿಲನ್ ಟಾಸ್ಕ್ ಕೊಟ್ಟಿದ್ದರು. ಅದರಲ್ಲಿ ಗಿಲ್ಲಿ ಗೆದ್ದಂತೆ ಕಾಣ್ತಿದೆ. ಈ ಸನ್ನಿವೇಶದ ಪ್ರೋಮೊವನ್ನು ಕಲರ್ಸ್ ಕನ್ನಡ ವಾಹಿನಿ ರಿಲೀಸ್ ಮಾಡಿದೆ.
ಮನೆಯಲ್ಲಿ ಒಬ್ಬರನ್ನೊಬ್ಬರು ಬಿಟ್ಟುಕೊಡಲಾರದಷ್ಟು ಹತ್ತಿರವಾಗಿದ್ದರು ಗಿಲ್ಲಿ-ಕಾವ್ಯ. ಇತರೆ ಸ್ಪರ್ಧಿಗಳು ಎಷ್ಟೇ ಟಾಂಟ್ ಮಾಡಿದ್ರೂ ಇಬ್ಬರೂ ಡೋಂಟ್ ಕೇರ್ ಎನ್ನುತ್ತಿದ್ದರು. ಆದ್ರೆ, ಮನೆಗೆ ವಿಲನ್ ಬಂದಾಗಿನಿಂದ ಪರಿಸ್ಥಿತಿ ಉಲ್ಟಾ ಆಗಿದೆ. ಮೊಟ್ಟ ಮೊದಲ ಬಾರಿಗೆ ಗಿಲ್ಲಿಯನ್ನು ಕಾವ್ಯ ನಾಮಿನೇಟ್ ಮಾಡಿ ಅಚ್ಚರಿ ಮೂಡಿಸಿದ್ದರು. ಆಗಿನಿಂದ ಗಿಲ್ಲಿ ‘ಒಂದೇ ತಟ್ಟೇಲಿ ಅನ್ನ ತಿಂದು ಮುಹೂರ್ತ ಇಟ್ರಲ್ಲ.. ಬೆನ್ನಿಗೆ ಚೂರಿ ಹಾಕಿದ್ರಲ್ಲ’ ಅಂತ ಬೇರೆಯವರನ್ನು ಮುಂದಿಟ್ಟುಕೊಂಡು ಕಾವ್ಯಗೆ ಟಾಂಗ್ ಕೊಡ್ತಿದ್ದರು.
