ಉದಯವಾಹಿನಿ , ಬೆಂಗಳೂರು: ಮೊದಲ ಪಿಂಕ್ ಮೆಟ್ರೋ ರೈಲು ಕೊತ್ತನೂರು ಡಿಪೋಗೆ ಬಂದಿಳಿದಿದೆ. ಚಾಲಕರಹಿತ ಪಿಂಕ್ ಮೆಟ್ರೋ ರೈಲು ಡಿಪೋಗೆ ತಲುಪಿದೆ. ಈ ರೈಲನ್ನು ಬಿಇಎಂಎಲ್ ಅಭಿವೃದ್ಧಿ ಪಡಿಸಿದೆ. ಕಾಳೇನ ಅಗ್ರಹಾರ – ನಾಗವಾರ ಮಾರ್ಗದ ಪಿಂಕ್ ಮೆಟ್ರೋ ಲೈನ್ನಲ್ಲಿ 2026ರ ಮೇ ತಿಂಗಳೊಳಗೆ ಈ ರೈಲು ಸಂಚಾರ ನಡೆಸಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಸಹ ಸುಳಿವು ನೀಡಿದ್ದರು. ಈ ಮಾರ್ಗ ಬೆಂಗಳೂರಿನ ಉತ್ತರ-ದಕ್ಷಿಣ ಸಂಪರ್ಕದ ಕೊಂಡಿಯಾಗಿದ್ದು, 21 ಕಿ.ಮೀ ಉದ್ದದ ಈ ಮಾರ್ಗವು 18 ನಿಲ್ದಾಣಗಳನ್ನು ಹೊಂದಿದೆ. ಈಗಾಗಲೇ ಸುರಂಗ ಮಾರ್ಗದ ಕಾಮಗಾರಿ 95% ರಷ್ಟು ಪೂರ್ಣಗೊಂಡಿದೆ.
ಇನ್ನೂ ಬಿಎಂಆರ್ಸಿಎಲ್ ಗುಲಾಬಿ ಮತ್ತು ನೀಲಿ ಮಾರ್ಗಗಳಿಗಾಗಿ ಹಂತ 2ಎ ಮತ್ತು 2ಬಿ ಒಟ್ಟು 60 ರೈಲು ಸೆಟ್ಗಳನ್ನು ಖರೀದಿಸಲು ಬಿಇಎಂಎಲ್ ಜೊತೆ ಒಪ್ಪಂದ ಮಾಡಿಕೊಂಡಿದೆ.
