ಉದಯವಾಹಿನಿ, ಮುಂಬೈ: ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಮಹಿಳೆಯೊಬ್ಬಳು ಜಗಳದ ವೇಳೆ ‘ಸ್ತ್ರಿಧನ್’ (ವಿವಾಹದ ವೇಳೆ ಪೋಷಕರು ಅಥವಾ ಅತ್ತೆಯಿಂದ ಮಹಿಳೆ ಪಡೆಯುವ ಚರ ಅಥವಾ ಸ್ಥಿರ ಆಸ್ತಿಗಳು) ಹಿಂದಿರುಗಿಸುವಂತೆ ಒತ್ತಾಯಿಸಿದ್ದಕ್ಕೆ ಗಂಡ ಮತ್ತು ಅವನ ಸಹೋದರಿ ಸೇರಿ ಆಕೆಯನ್ನು ಹತ್ಯೆ ಮಾಡಿದ್ದಾರೆ. ಹತ್ಯೆಯಾದ ಮಹಿಳೆಯನ್ನು ಕಲ್ಪನಾ ಸೋನಿ (35) ಎಂದು ಗುರುತಿಸಲಾಗಿದೆ. ಈಕೆ 2015 ರಲ್ಲಿ ಮಹೇಶ್ ಸೋನಿಯನ್ನು (38) ವಿವಾಹವಾಗಿದ್ದರು. ಬಳಿಕ ವಿರಾರ್‌ನಲ್ಲಿ ವಾಸಿಸುತ್ತಿದ್ದರು. ಆಗಾಗ ಮಹಿಳೆ ಮತ್ತು ಆಕೆಯ ಅತ್ತೆಯ ನಡುವೆ ಗಲಾಟೆ ಆಗುತ್ತಿದ್ದು. ಈ ವೇಳೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಡಿ.27 ರಂದು ಸಹ ಮಹಿಳೆ ಹಾಗೂ ಆಕೆಯ ಅತ್ತೆಯ ನಡುವೆ ಜಗಳ ನಡೆದಿತ್ತು. ಈ ವೇಳೆ ಮಹಿಳೆ ತಾನು ಮನೆ ಬಿಟ್ಟು ಹೋಗುವುದಾಗಿ ಹೇಳಿದ್ದಳು. ಅಲ್ಲದೇ ತನಗೆ ಸೇರಬೇಕಾದ ‘ಸ್ತ್ರಿಧನ್’ನ್ನು ವಾಪಸ್‌ ಕೊಡುವಂತೆ ಒತ್ತಾಯಿಸಿದ್ದಳು. ಆಕೆಯ ಬೇಡಿಕೆಯಿಂದ ಕೋಪಗೊಂಡ ಮಹೇಶ್ ಮತ್ತು ಆತನ ಸಹೋದರಿ ದೀಪಾಲಿ ಸೋನಿ, ಹರಿತವಾದ ಆಯುಧದಿಂದ ಕಲ್ಪನಾಳ ತಲೆಯ ಮೇಲೆ ಹಲ್ಲೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!