
ಉಯವಾಹಿನಿ, ನ್ಯೂಯಾರ್ಕ್: ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ತಾವು ಬಗೆಹರಿಸಿದ್ದಾಗಿ ಮತ್ತೊಮ್ಮೆ ಹೇಳಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನೊಬೆಲ್ ಶಾಂತಿ ಪ್ರಶಸ್ತಿ ಪಡೆಯಲು ತಮ್ಮಷ್ಟು ಅರ್ಹರು ಇತಿಹಾದಲ್ಲಿ ಯಾರೂ ಇಲ್ಲ. ಆದರೆ, ಬರಾಕ್ ಒಬಮಾ ಏನು ಮಾಡದಿದ್ದರೂ ಅವರಿಗೆ ಶಾಂತಿ ಪ್ರಶಸ್ತಿ ಲಭ್ಯವಾಯಿತು ಎಂದು ಟೀಕಿಸಿದರು.
ಶ್ವೇತಭವನದಲ್ಲಿ ತೈಲ ಮತ್ತು ಅನಿಲ ಕಾರ್ಯನಿರ್ವಾಹಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ಸಂಘರ್ಷದಲ್ಲಿ ಎಂಟು ಜೆಟ್ಗಳನ್ನು ಹೊಡೆದುರುಳಿಸಲಾಯಿತು ಎಂದು ಪುರುಚ್ಚರಿಸಿದ ಟ್ರಂಪ್, ಅವುಗಳು ಯಾವ ದೇಶಕ್ಕೆ ಸೇರಿದವು ಎಂಬುದನ್ನು ಸ್ಪಷ್ಟಪಡಿಸಲಿಲ್ಲ.ಜನರು ಟ್ರಂಪ್ ಅವರನ್ನು ಇಷ್ಟಪಡುತ್ತಾರೋ ಇಲ್ಲವೋ, ಆದರೆ, ದೊಡ್ಡದಾದ 8 ಯುದ್ಧಗಳನ್ನು ನಾನು ನಿಲ್ಲಿಸಿದ್ದೇನೆ. ಕೆಲವರು 36 ವರ್ಷಗಳಿಂದ, ಕೆಲವು 32 ವರ್ಷದಿಂದ ಮತ್ತೆ ಕೆಲವು 28 ಹಾಗೂ 25 ವರ್ಷಗಳಿಂದ ನಡೆಯುತ್ತಿದ್ದ ಯುದ್ಧಗಳಾಗಿದೆ. ಮತ್ತೆ ಕೆಲವು ಭಾರತ ಮತ್ತು ಪಾಕಿಸ್ತಾನದಂತೆ ಸಂಘರ್ಷ ಪ್ರಾರಂಭಿಸಲು ಸಿದ್ದವಾಗಿದ್ದವು. ಕಳೆದ ವರ್ಷ ಶ್ವೇತಭವನಕ್ಕೆ ಭೇಟಿ ನೀಡಿದ್ದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ಎರಡು ಪರಮಾಣು ಶಸ್ತ್ರಸಜ್ಜಿತ ನೆರೆಹೊರೆಯವರ ನಡುವಿನ ಸಂಘರ್ಷವನ್ನು ನಿಲ್ಲಿಸುವ ಮೂಲಕ ಲಕ್ಷಾಂತರ ಜೀವಗಳನ್ನು ಉಳಿಸಿದ್ದು ಟ್ರಂಪ್ ಎಂದು ಮನ್ನಣೆ ನೀಡಿದರು ಎಂದು ಕೂಡ ಅಮೆರಿಕ ಅಧ್ಯಕ್ಷರು ತಿಳಿಸಿದರು.
ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ನಿಲ್ಲಲು ತಾವೇ ಕಾರಣ ಎಂದು ಟ್ರಂಪ್ ಅನೇಕ ಬಾರಿ ಹೇಳಿಕೆ ನೀಡಿದ್ದಾರೆ. ಕಳೆದ ವರ್ಷ ಮೇ 10ರಂದು ವಾಷಿಂಗ್ಟನ್ ಮಧ್ಯಸ್ಥಿಕೆಯಲ್ಲಿ ನಡೆದ ದೀರ್ಘ ರಾತ್ರಿ ಮಾತುಕತೆಯ ನಂತರ ಎರಡೂ ದೇಶಗಳು ಪೂರ್ಣ ಮತ್ತು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದಾಗಿನಿಂದ ಟ್ರಂಪ್ ಈ ಹೇಳಿಕೆಗಳನ್ನು ನೀಡುತ್ತಲಿದ್ದಾರೆ.
ಮಾತು ಮುಂದುವರೆಸಿದ ಟ್ರಂಪ್, ಶ್ವೇತಭವನದಲ್ಲಿ ಎರಡನೇ ಅವಧಿಯ ಎಂಟು ತಿಂಗಳೊಳಗೆ ಎಂಟು ಯುದ್ಧಗಳನ್ನು ನಿಲ್ಲಿಸಿರುವುದರಿಂದ ಇತಿಹಾಸದಲ್ಲಿ ಅವರಿಗಿಂತ ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹರು ಯಾರೂ ಇಲ್ಲ. ಆದರೆ, ಈ ಬಗ್ಗೆ ನಾನು ಹೆಮ್ಮೆಪಡಲು ಬಯಸುವುದಿಲ್ಲ. ಬೇರೆಯಾರು ಯುದ್ಧಗಳನ್ನು ಇತ್ಯರ್ಥ ಪಡಿಸಲಿಲ್ಲ. ಒಬಾಮಾಗೆ ನೊಬೆಲ್ ಪ್ರಶಸ್ತಿ ಯಾವ ಕಾರಣಕ್ಕೆ ಸಿಕ್ಕಿತು ಎಂದು ಏಕೆ ಇಂದಿಗೂ ಅವರಿಗೂ ತಿಳಿದಿಲ್ಲ. ನನಗೆ ನೊಬೆಲ್ ಪ್ರಶಸ್ತಿ ಸಿಕ್ಕಿತು ಎಂದು ಹೇಳಿಕೊಳ್ಳುತ್ತಾರೆ. ಅಧ್ಯಕ್ಷನಾಗಿ ಅಧಿಕಾರ ವಹಿಸಿ ಕೊಂಡಾಕ್ಷಣ ಅವರಿಗೆ ಪ್ರಶಸ್ತಿ ಸಿಕ್ಕಿತು. ಆತ ಏನನ್ನು ಮಾಡಲಿಲ್ಲ. ಆತ ಕೆಟ್ಟ ಅಧ್ಯಕ್ಷ ಎಂದು ಟ್ರಂಪ್ ಅಸಮಾಧಾನ ಹೊರ ಹಾಕಿದ್ದಾರೆ.
ಪ್ರತಿಯುದ್ದ ನಿಲ್ಲಿಸಿದಾಗಲೂ ಒಬ್ಬರಿಗೆ ನೊಬೆಲ್ ಪ್ರಶಸ್ತಿ ಸಿಗಬೇಕು. ಅವು ಪ್ರಮುಖ ಯುದ್ಧಗಳಾಗಿದೆ. ಈ ಯುದ್ಧಗಳು ಮುಗಿಯುತ್ತದೆ ಎಂದು ಯಾರು ಭಾವಿಸಿರಲಿಲ್ಲ. ರಷ್ಯಾ ಅಧ್ಯಕ್ಷರು ಕಳೆದ 10 ವರ್ಷದಿಂದ ಎರಡು ಯುದ್ಧ ನಿಲ್ಲಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ ಎಂದು ಹೇಳಿದರು.
