ಉದಯವಾಹಿನಿ, ಜನವರಿ14ರಂದು ಮಕರ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಸೂರ್ಯನ ಉತ್ತರಾಯಣ ಪಥಾರಂಭದ ಸಂಕೇತವಾಗಿ ಈ ಹಬ್ಬವನ್ನು ಆಚರಿಸುತ್ತೇವೆ. ಕತ್ತಲೆ ಹೋಗಲಾಡಿಸಿ ಬೆಳಕು ತರುವ ಈ ಹಬ್ಬ ಭರವಸೆ ಹಾಗೂ ಸಮೃದ್ಧಿಯ ಸಂಕೇತ. ಕರ್ನಾಟಕದಲ್ಲಿ ಎಳ್ಳು, ಬೆಲ್ಲ ವಿತರಿಸುವುದು, ತಮಿಳುನಾಡಿನಲ್ಲಿ ಪೊಂಗಲ್ ಹಾಗೂ ಗುಜರಾತ್‌ನಲ್ಲಿ ಗಾಳಿಪಟ ಹಾರಿಸುವುದರೊಂದಿಗೆ ಸಡಗರದಿಂದ ಸಂಕ್ರಾಂತಿಯ ಆಚರಮೆ ನಡೆಯುತ್ತದೆ.

ಹಬ್ಬದ ಸಮಯದಲ್ಲಿ ಬಗೆ ಬಗೆಯ ಸಿಹಿ ತಿಂಡಿಗಳನ್ನು ತಯಾರಿಸಲಾಗುತ್ತದೆ. ನಿಮ್ಮ ಮನೆಯಲ್ಲಿ ಈ ಬಾರಿ ಹೊಸ ಬಗೆಯ ಸಿಹಿ ತಿನಿಸು ತಯಾರಿಸಬಹುದು. ಬಾಂಬೆ ರವೆ ಇದ್ದರೆ, ಹೆಚ್ಚಿನ ಜನರು ಉಪ್ಮಾ ಮಾಡಲು ಯೋಜಿಸುತ್ತಾರೆ. ನಿಮ್ಮಲ್ಲಿ ಸಿಹಿತಿಂಡಿ ಅಂದ್ರೆ ಕೇಸರಿಬಾತ್ ಮಾಡುತ್ತಾರೆ. ಇವುಗಳ ಬದಲಿಗೆ ಒಮ್ಮೆ ಬರ್ಫಿ ಪ್ರಯತ್ನಿಸಿ. ಮನೆ ಸದಸ್ಯರು ಈ ಬರ್ಫಿ ಸೇವಿಸಿದರೆ ವಾವ್! ಸೂಪರ್! ಎನ್ನುವ ಭಾವ ಲಭಿಸುತ್ತದೆ. ಅತ್ಯಂತ ಸುಲಭವಾಗಿ ಈ ಬರ್ಫಿಯನ್ನು ಮನೆಯಲ್ಲಿ ಲಭ್ಯವಿರುವ ಪದಾರ್ಥಗಳೊಂದಿಗೆ ಸಿದ್ಧಪಡಿಸಬಹುದು. ಮಕ್ಕಳು, ವಯಸ್ಕರು ಇಬ್ಬರೂ ಈ ಸ್ವೀಟ್​ ತುಂಬಾ ಇಷ್ಟಪಟ್ಟು ಸೇವನೆ ಮಾಡುತ್ತಾರೆ.
ರವಾ ಬರ್ಫಿಗೆ ಬೇಕಾಗುವ ಸಾಮಗ್ರಿ:

ಬಾಂಬೆ ರವೆ – 1 ಕಪ್
ಹಾಲು – 1 ಕಪ್
ನೀರು – ಸಾಕಷ್ಟು
ಕೇಸರಿ – ಒಂದು ಚಿಟಿಕೆ
ತುಪ್ಪ – ಸಾಕಷ್ಟು
ಗೋಡಂಬಿ – 20
ಸಕ್ಕರೆ – ಕಾಲು ಕಪ್
ಏಲಕ್ಕಿ ಪುಡಿ – ಕಾಲು ಟೀಸ್ಪೂನ್
ರವಾ ಬರ್ಫಿ ಸಿದ್ಧಪಡಿಸುವ ವಿಧಾನ:

ಸಂಕ್ರಾಂತಿಗೆ ಹೇಳಿ ಮಾಡಿಸಿದ ರವಾ ಬರ್ಫಿ ತಯಾರಿಸಲು ಮೊದಲಿಗೆ ಒಲೆಯನ್ನು ಆನ್ ಮಾಡಿ ಅದರಲ್ಲಿ ಒಂದು ಪಾತ್ರೆ ಇಡಿ, ಅದರಲ್ಲಿ ಒಂದು ಕಪ್ ಹಾಲು ಸುರಿಯಿರಿ. ನಂತರ ಕಾಲು ಕಪ್ ನೀರು, ಕೇಸರಿಯನ್ನು ಸೇರಿಸಿ ಮಧ್ಯಮ ಉರಿಯಲ್ಲಿ ಕುದಿಸಿ.
ಹಾಲು ಕುದಿ ಬಂದು ಒಂದೆರಡು ಬಾರಿ ಗುಳ್ಳೆಗಳಾದ ನಂತರ, ಬಟ್ಟಲನ್ನು ತೆಗೆದು ಪಕ್ಕಕ್ಕೆ ಇಡಿ.
ಇದೇ ಒಲೆಯ ಮೇಲೆ ಇನ್ನೊಂದು ಪ್ಯಾನ್ ಇಟ್ಟು ಅರ್ಧ ಕಪ್ ತುಪ್ಪವನ್ನು ಸುರಿದು ಕರಗಿಸಲು ಬಿಡಬೇಕಾಗುತ್ತದೆ. ತುಪ್ಪ ಸ್ವಲ್ಪ ಬಿಸಿಯಾದ ನಂತರ, ಬಾಂಬೆ ರವೆಯನ್ನು ಸೇರಿಸಿ ಕಡಿಮೆ ಅಥವಾ ಮಧ್ಯಮ ಉರಿಯಲ್ಲಿ ಹುರಿಯಿರಿ.
ರವೆಯನ್ನು ಚಿನ್ನದ ಬಣ್ಣಕ್ಕೆ ತಿರುಗುವವರೆಗೆ ಮತ್ತು ಉತ್ತಮ ಪರಿಮಳ ಬರುವವರೆಗೆ ಹುರಿಯಿರಿ, ಸಾಂದರ್ಭಿಕವಾಗಿ ಬೆರೆಸುತ್ತಾ ಇರಬೇಕಾಗುತ್ತದೆ, ಈ ಮಧ್ಯೆ ಗೋಡಂಬಿಯನ್ನು ಮಿಕ್ಸರ್ ಜಾರ್‌ನಲ್ಲಿ ಹಾಕಿ ಒರಟಾಗಿ ಪುಡಿಮಾಡಿ.
ರವೆ ಸಂಪೂರ್ಣವಾಗಿ ಹುರಿದ ಬಳಿಕ, ಬೇಯಿಸಿದ ಹಾಲನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸಿ ಮತ್ತು ಉಂಡೆಗಳಿಲ್ಲದೆ ಮಿಶ್ರಣ ಮಾಡಿ.
ರವೆ ಹಾಲು ಹೀರಿಕೊಂಡು ದಪ್ಪಗಾದ ನಂತರ, ನುಣ್ಣಗೆ ರುಬ್ಬಿದ ಗೋಡಂಬಿ ಮತ್ತು ಸಕ್ಕರೆಯನ್ನು ಸೇರಿಸಿ ಹಾಗೂ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.

Leave a Reply

Your email address will not be published. Required fields are marked *

error: Content is protected !!