
ಉದಯವಾಹಿನಿ, ಬಾಲಿವುಡ್ ಪ್ರೇಕ್ಷಕರನ್ನು ತನ್ನ ಮ್ಯಾನರಿಸಂ ಮೂಲಕ ನಗಿಸುತ್ತಿದ್ದ ರಾಜ್ಪಾಲ್ ಯಾದವ್ ಅವರಿಗೆ ಈಗ ನಿಜ ಜೀವನದಲ್ಲಿ ಸಂಕಷ್ಟ ಎದುರಾಗಿದೆ. ಹಳೆಯ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ನಟನ ವಿರುದ್ಧ ಕಠಿಣ ನಿಲುವು ತಳೆದಿದ್ದು, ಕೂಡಲೇ ಜೈಲು ಅಧಿಕಾರಿಗಳ ಮುಂದೆ ಶರಣಾಗುವಂತೆ ಆದೇಶಿಸಿದೆ.
ರಾಜ್ಪಾಲ್ ಯಾದವ್ ವಿರುದ್ಧದ ಹಣಕಾಸು ವ್ಯವಹಾರದ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಅವರಿಗೆ ದೂರುದಾರರಿಗೆ ಹಣ ಪಾವತಿಸುವಂತೆ 2024ರಲ್ಲೇ ಸೂಚಿಸಿತ್ತು. ಆದರೆ, ಕೋರ್ಟ್ ನೀಡಿದ್ದ ಗಡುವಿನೊಳಗೆ ಅವರು ಬಾಕಿ ಮೊತ್ತವನ್ನು ಪಾವತಿಸದ ಕಾರಣ, ಈಗ ಜೈಲು ಶಿಕ್ಷೆ ಅನಿವಾರ್ಯವಾಗಿದೆ.
