ಉದಯವಾಹಿನಿ, ಹೈದರಾಬಾದ್: ಭಾರತದ ಮೊದಲ ಕೃತಕ ಬುದ್ದಿಮತ್ತೆ ಶೃಂಗಸಭೆ ಇಂದಿನಿಂದ ಆರಂಭವಾಗಿದೆ. ಈ ವೇದಿಕೆಯ ಮೂಲಕ ಭವಿಷ್ಯದ ಎಐ ಕುರಿತು ಚರ್ಚಿಸಲು ಜಾಗತಿಕ ತಂತ್ರಜ್ಞಾನ ದಿಗ್ಗಜರು ಮತ್ತು ಎಐ ಹೂಡಿಕೆದಾರರು ಒಂದೇ ವೇದಿಕೆಯಲ್ಲಿ ಸೇರುತ್ತಿದ್ದಾರೆ.
ಇಂದಿನಿಂದ ಫೆ.20ರವರೆಗೆ ಸಾಗಲಿರುವ ಶೃಂಗಸಭೆಯಲ್ಲಿ ಸರಿಸುಮಾರು 45 ದೇಶಗಳ ಸಚಿವಾಲಯದ ನಿಯೋಗ ಮತ್ತು ಜಾಗತಿಕ ಎಐ ಕಂಪನಿಗಳ ಸಿಇಒಗಳು, ಟೆಕ್ ಸಂಸ್ಥೆಗಳು ಭಾಗಿಯಾಗಲಿವೆ. ಇದರಲ್ಲಿ ಎಐ ನೀತಿ, ಸಂಶೋಧನೆ, ಉದ್ಯಮ ಅನ್ವಯಿಕೆ ಮತ್ತು ಸಾರ್ವಜನಿಕ ತೊಡಗಿಸಿಕೊಳ್ಳುವಿಕೆಯ ಕುರಿತು ಅಧಿವೇಶನ, ಪ್ರದರ್ಶನ ಮತ್ತು ಮುಖ್ಯ ಭಾಷಣ, ಸಂವಾದಗಳು ನಡೆಯಲಿವೆ. ಈ ಶೃಂಗಸಭೆ ತಂತ್ರಜ್ಞಾನದ ಅಭಿವೃದ್ಧಿಯನ್ನು ರೂಪಿಸುವಲ್ಲಿ ಭಾರತದ ಪಾತ್ರವನ್ನು ಎತ್ತಿ ತೋರಿಸುತ್ತದೆ.
ನವದೆಹಲಿಯ ಭಾರತ್ ಮಂಟಪದಲ್ಲಿ ಸಾಗುತ್ತಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯನ್ನು ಜಾಗತಿಕವಾಗಿ ಸಾಗಿರುವ ಪ್ರಮುಖ ಎಐ ಕಾರ್ಯಕ್ರಮವಾಗಿ ಪರಿಗಣಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗುವ ಇಚ್ಛೆ ಅನೇಕರಲ್ಲಿದೆ. ಒಂದು ವೇಳೆ ಎಐ ತಂತ್ರಜ್ಞಾನ ಕುರಿತ ಆಸಕ್ತಿ ನಿಮಗಿದ್ದು ಸಂವಾದ, ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಾದರೆ, ಎಐ ಶೃಂಗಸಭೆಯ ಅಧಿಕೃತ ವೆಬ್ಸೈಟ್ ಅಥವಾ ಆ್ಯಪ್ ಮೂಲಕ ನೋಂದಣಿ ಮಾಡಬಹುದು.
