ಉದಯವಾಹಿನಿ, ಹೈದರಾಬಾದ್: ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ‘ಫಿಟ್​ ಇಂಡಿಯಾ ಭಾರತ್​’ ಅಭಿಯಾನದಡಿ ಇಲ್ಲಿನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಇದೇ 14ರಂದು ‘ಗ್ಲೋ ರನ್’ ಕಾರ್ಯಕ್ರಮ ನಡೆಯಲಿದೆ. ಹಲವಾರು ಓಟಗಾರರು ಇದರಲ್ಲಿ ಭಾಗವಹಿಸಲಿದ್ದಾರೆ.ಕಾರ್ಯಕ್ರಮದ ಹಿನ್ನೆಲೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಪ್ರಸಿದ್ಧ ಕೂಚಿಪುಡಿ ನೃತ್ಯಗಾರ್ತಿ ದೀಪಿಕಾ ರೆಡ್ಡಿ ಮತ್ತು ಅಂತಾ​ರಾಷ್ಟ್ರೀಯ ಬಿಲ್ಲುಗಾರ್ತಿ ಜ್ಯೋತಿ ಸುರೇಖಾ ವೆನ್ನಮ್ ಅವರು ರಾಮೋಜಿ ಫಿಲ್ಮ್ ಸಿಟಿಯ ಸಿತಾರಾ ಹೋಟೆಲ್‌ನಲ್ಲಿ  ಜೆರ್ಸಿ ಮತ್ತು ವಿಜೇತರಿಗೆ ನೀಡಲಾಗುವ ಪದಕಗಳನ್ನು ಅನಾವರಣ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ದೀಪಿಕಾ ರೆಡ್ಡಿ ಅವರು, “ಗ್ಲೋ ರನ್ ಫಿಟ್‌ನೆಸ್, ಸಂತೋಷ ಮತ್ತು ಒಗ್ಗಟ್ಟನ್ನು ಆಚರಿಸುವ ಸ್ಪೂರ್ತಿದಾಯಕ ಮತ್ತು ಅಂತರ್ಗತ ಕಾರ್ಯಕ್ರಮ ಎಂದು ಬಣ್ಣಿಸಿದರು. ಇಲ್ಲಿ ಗೆಲುವು, ಸೋಲು ಮುಖ್ಯವಲ್ಲ. ಭಾಗವಹಿಸುವ ಪ್ರತಿಯೊಬ್ಬರೂ ವಿಜೇತರು. ಈ ಓಟವು ಸಂತೋಷ, ಶಕ್ತಿ ಮತ್ತು ಚಲನೆಯನ್ನು ಆಚರಿಸುವುದಾಗಿದೆ. ಇಂತಹ ಕಾರ್ಯಕ್ರಮಗಳು ಎಲ್ಲ ವಯಸ್ಸಿನ ಜನರು ಸಕ್ರಿಯವಾಗಿರಲು ಪ್ರೇರೇಪಿಸುತ್ತದೆ ಎಂದು ಹೇಳಿದರು.
ಓಟದಿಂದ ದೈಹಿಕ ಆರೋಗ್ಯ: ಬಿಲ್ಲುಗಾರ್ತಿ ಜ್ಯೋತಿ ಸುರೇಖಾ ವೆನ್ನಮ್ ಅವರು ಮಾತನಾಡಿ, “ದೈನಂದಿನ ಜೀವನದಲ್ಲಿ ಫಿಟ್‌ನೆಸ್‌ನ ಬಹುಮುಖ್ಯ. ಓಟವು ನಮ್ಮ ಜೀವನಶೈಲಿಯ ಭಾಗವಾಗಬೇಕು. ಇದು ನಮಗೆ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಾನಸಿಕ ಶಾಂತಿಯನ್ನೂ ನೀಡುತ್ತದೆ” ಎಂದರು.

ಗ್ಲೋ ರನ್​ ಕಾರ್ಯಕ್ರಮದ ನಿರ್ದೇಶಕ ಅಭಿಷೇಕ್ ಮಿಶ್ರಾ ಅವರು ಕಾರ್ಯಕ್ರಮದ ವಿವರಗಳನ್ನು ನೀಡಿದರು. ಇದೇ ಮೊದಲ ಬಾರಿಗೆ ಓಟಗಾರರು, ಕುಟುಂಬಗಳು ಮತ್ತು ಅನುಭವಿ ಕ್ರೀಡಾಪಟುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಇದರಲ್ಲಿ 3 ಸಾವಿರ ಕಿ.ಮೀ., 5 ಸಾವಿರ ಕಿ.ಮೀ. ಮತ್ತು 10 ಸಾವಿರ ಕಿ.ಮೀ. ವಿಭಾಗಗಳನ್ನು ಒಳಗೊಂಡಿದೆ. ಕಾರ್ಯಕ್ರಮ ಸಂಜೆ 5.30ಕ್ಕೆ ಪ್ರಾರಂಭವಾಗುತ್ತದೆ. ಇದು ಸಂಜೆ ಓಟದ ವಿಶಿಷ್ಟ ಅನುಭವ ನೀಡುತ್ತದೆ ಎಂದು ಹೇಳಿದರು. ಹೆಲ್ತಿಯನ್‌ನ ಚೀಫ್​ ಗ್ರೋಥ್​ ಆಫೀಸರ್​ ಪ್ರಭು, ರೆನೋವಾ ಆಸ್ಪತ್ರೆಗಳ ಸಿಇಒ ರವೀಂದ್ರನಾಥ್ ಮತ್ತು ರಾಮೋಜಿ ಫಿಲ್ಮ್ ಸಿಟಿಯ ಉಪಾಧ್ಯಕ್ಷ (ಮಾರ್ಕೆಟಿಂಗ್) ಎ.ವಿ. ರಾವ್ ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!