ಉದಯವಾಹಿನಿ, ನಳಂದ, ಬಿಹಾರ: ಭಾರತದಾದ್ಯಂತ ಪಾಲ್ಗುಣ ಮಾಸದಲ್ಲಿ ಬಹುತೇಕ ಪ್ರತಿಯೊಂದು ಸ್ಥಳವೂ ಬಣ್ಣಗಳಲ್ಲಿ ಮುಳಿಗೇಳುತ್ತದೆ. ಬೀದಿಗಳು ಗುಲಾಲ್‌ನಿಂದ ತುಂಬಿರುತ್ತವೆ. ನೆರೆಹೊರೆಗಳಲ್ಲಿ ನಗು ಪ್ರತಿಧ್ವನಿಸುತ್ತದೆ. ಆದರೆ, ನಳಂದ ಜಿಲ್ಲೆಯ ಐದು ಹಳ್ಳಿಗಳಲ್ಲಿ ಹೋಳಿಯನ್ನು ಸಂಯಮ, ಪ್ರಾರ್ಥನೆ ಮತ್ತು ಉಪವಾಸ ವ್ರತಗಳನ್ನು ಮಾಡುವ ಮೂಲಕ ಆಚರಿಸಲಾಗುತ್ತದೆ.

ಬಿಹಾರ ಶರೀಫ್ ಬಳಿ ಇರುವ – ಪಟುವಾನಾ, ಬಸ್ವಾನ್ ಬಿಘಾ, ಧಿಬರಪರ್, ನಕತ್‌ಪುರ ಮತ್ತು ದೆದ್ಧಧಾರದಂತಹ ಗ್ರಾಮಗಳು ಕಳೆದ 54 ವರ್ಷಗಳಿಂದ ವಿಭಿನ್ನ ಸಂಪ್ರದಾಯವನ್ನು ಅನುಸರಿಸಿಕೊಂಡು ಬರುತ್ತಿವೆ. ಯಾವುದೇ ಬಣ್ಣಗಳಿಲ್ಲ, ಮೋಜುಗಳಿಲ್ಲ, ಗದ್ದಲದ ಕೂಟಗಳಿಲ್ಲ. ಬದಲಾಗಿ ಈ ದಿನವನ್ನು ಉಪವಾಸ, ಸಂಯಮ ಮತ್ತು ದೇವರು ಮತ್ತು ದೇವತೆಗಳ ಹೆಸರಿನಲ್ಲಿ ನಿರಂತರವಾಗಿ ಕೀರ್ತನೆಗಳನ್ನು ಹಾಡುವುದಕ್ಕೆ ಮೀಸಲಾಗಿಡಲಾಗುತ್ತದೆ.

ಹೋಳಿ ದಿನದಂದು ಮುಂಜಾನೆಯಿಂದಲೇ ಭಕ್ತಿಗೀತೆಗಳು ಎಲ್ಲಡೆ ಸದ್ದು ಮಾಡುತ್ತವೆ. “ಹರೇ ರಾಮ, ಹರೇ ಕೃಷ್ಣ” ಎಂಬ ಮಂತ್ರಗಳು ಬೀದಿ ಬೀದಿಗಳಲ್ಲಿ ಪ್ರತಿಧ್ವನಿಸುತ್ತವೆ. ಪುರುಷರು, ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಭಜನೆಗಾಗಿ ಒಟ್ಟುಗೂಡುತ್ತಾರೆ.

ಹೋಳಿಕಾ ದಹನದ ಸಂಜೆಯಂದು ಹಳ್ಳಿಗಳು ಸಿದ್ದಗೊಳ್ಳುತ್ತವೆ. ಅಲ್ಲಿ 24 ಗಂಟೆಗಳ ನಿರಂತರ ಕೀರ್ತನೆ ಆಯೋಜಿಸಲಾಗುತ್ತದೆ. ಹೋಳಿ ಹಬ್ಬದ ದಿನದವರೆಗೆ ಈ ಭಜನೆ – ಕೀರ್ತನೆಗಳು ಮುಂದುವರಿಯುತ್ತವೆ. ಅದು ಪ್ರಾರಂಭವಾಗುವ ಮೊದಲು, ಕುಟುಂಬಗಳು ಸಿಹಿತಿಂಡಿಗಳು ಮತ್ತು ಸರಳ ಭಕ್ಷ್ಯಗಳನ್ನು ಆಚರಣೆಗೂ ಮುಂಚಿತವಾಗಿ ತಯಾರಿಸುತ್ತವೆ. ಆಚರಣೆ ಪ್ರಾರಂಭವಾದ ನಂತರ, ಅಡುಗೆಮನೆಗಳು ಸಂಪೂರ್ಣವಾಗಿ ಮುಚ್ಚಲ್ಪಡುತ್ತವೆ. ಹಬ್ಬ ಮುಗಿಯುವವರೆಗೆ ಒಲೆ ಹೊತ್ತಿಸುವುದಿಲ್ಲ. ಅನೇಕ ಗ್ರಾಮಸ್ಥರು ಈ ದಿನ ಉಪ್ಪನ್ನು ಕೂಡಾ ಸೇವಿಸುವುದಿಲ್ಲ, ಇದನ್ನು ಶುದ್ಧೀಕರಣದ ಕ್ರಿಯೆಯಾಗಿ ಇಲ್ಲಿನ ಜನರು ನೋಡುತ್ತಾರೆ.

ಇಲ್ಲಿನ ಆಚರಣೆ ಬಗ್ಗೆ ಗ್ರಾಮಸ್ಥರು ಹೇಳಿದ್ದು ಹೀಗೆ: ನಕತ್ಪುರದಲ್ಲಿ ಒಬ್ಬ ಸಂತರು ಹಬ್ಬದ ದಿನದಂದು ಏನನ್ನು ದುರುಪಯೋಗಪಡಿಸಿಕೊಳ್ಳಬೇಡಿ ಅಥವಾ ಜಗಳವಾಡಬೇಡಿ ಬದಲಿಗೆ ನಿರಂತರ ಕೀರ್ತನೆ ಮಾಡಿ ಎಂದು ಹೇಳಿದ್ದರು. ಅಂದಿನಿಂದ ನಾವು ಹೋಳಿಯನ್ನು ಇದೇ ರೀತಿಯಲ್ಲಿ ಆಚರಿಸುತ್ತಿದ್ದೇವೆ. ನಾವು ನಮ್ಮ ಒಲೆಗಳನ್ನು ಬೆಳಗಿಸುವುದಿಲ್ಲ. ನಾವು ದೇವರಿಗೆ ಸ್ತುತಿಗಳನ್ನು ಹಾಡುತ್ತೇವೆ ಎಂದು ಗ್ರಾಮಸ್ಥೆ ಸೀಮಾ ದೇವಿ ಹೇಳಿದರು

Leave a Reply

Your email address will not be published. Required fields are marked *

error: Content is protected !!