ಉದಯವಾಹಿನಿ, ಹೈದರಾಬಾದ್ (ತೆಲಂಗಾಣ): 2008ರ ಬಲಿಮೇಲದಲ್ಲಿ ನಡೆದ ನಕ್ಸಲ್ ಕಾರ್ಯಾಚರಣೆಯಲ್ಲಿ ಹುತಾತ್ಮರಾದ 32 ಗ್ರೇಹೌಂಡ್ಸ್ ಕಮಾಂಡೋ ಮತ್ತು ಓರ್ವ ಸಬ್ ಇನ್ಸ್ಪೆಕ್ಟರ್ ಕುಟುಂಬ ಸದಸ್ಯರಿಗೆ ಮನೆ ಪಟ್ಟಾ(ಆಸ್ತಿ ಪತ್ರ)ಗಳನ್ನು ತೆಲಂಗಾಣ ಡಿಜಿಪಿ ಬಿ ಶಿವದಾರ್ ರೆಡ್ಡಿ ಹಸ್ತಾಂತರಿಸಿದರು. ಈ ಮೂಲಕ 18 ವರ್ಷದ ಕಾಯುವಿಕೆ, ನೋವು ಮತ್ತು ಅನಿಶ್ಚಿತತೆಗೆ ಕೊನೆಗೂ ಪರಿಹಾರ ಸಿಕ್ಕಿದೆ.
2008ರ ಜೂನ್ನಲ್ಲಿ ಒಡಿಶಾ ಗಡಿಯಲ್ಲಿರುವ ಚಿತ್ರಕೊಂಡ ಬಳಿಯ ಬಲಿಮೇಲ ಮೀಸಲು ಪ್ರದೇಶದಲ್ಲಿ ನಡೆದ ನಕ್ಸಲ್ ಕಾರ್ಯಾಚರಣೆಯಲ್ಲಿ ಗ್ರೇಹೌಂಡ್ಸ್ ಕಮಾಂಡೋ ಸೇರಿದಂತೆ 38 ಸಿಬ್ಬಂದಿಗಳು ಹುತಾತ್ಮರಾಗಿದ್ದರು. ಹುತಾತ್ಮರ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರ 200ಚದರ್ ಅಡಿಯ ಭೂಮಿಯನ್ನು ನೀಡುವುದಾಗಿ 2013ರಲ್ಲಿ ಸರ್ಕಾರ ಘೋಷಿಸಿತ್ತು. ಆದರೆ, ಗಜುಲರಮರಮ್ನಲ್ಲಿನ ಭೂ ವಿವಾದದಿಂದಾಗಿ ಈ ಹಸ್ತಾಂತರ ಪ್ರಕ್ರಿಯೆ ನೆನಗುದಿಗೆ ಬಿದ್ದಿತ್ತು. ಹಲವು ವರ್ಷಗಳ ಆಡಳಿತಾತ್ಮಕ ತಡೆ ಇದೀಗ ಅಂತಿಮವಾಗಿ ತೆರವಾಗಿದ್ದು, ಕಳೆದ ಅಕ್ಟೋಬರ್ನಲ್ಲಿ ಈ ಕುರಿತು ಮತ್ತೊಂದು ಹೊಸ ಆದೇಶ ಜಾರಿ ಮಾಡಲಾಗಿತ್ತು. ಅದರಂತೆ ಮಂಗಳವಾರ ಸಂತ್ರಸ್ತ ಕುಟುಂಬಗಳಿಗೆ ಆಸ್ತಿ ಪತ್ರ ನೀಡಲಾಗಿದೆ.ಇದರಲ್ಲಿ 33 ಕುಟುಂಬಗಳು ಫಲಾನುಭವಿಗಳಾಗಿದ್ದಾರೆ. ಇದೀಗ ಆಸ್ತಿ ಪತ್ರ ನೀಡಿರುವ ಡಿಜಿಪಿ ರೆಡ್ಡಿ, ಘಟನೆ ಸಂದರ್ಭದಲ್ಲಿ ವಿಶೇಷ ಗುಪ್ತಚರ ದಳದ ಡಿಐಜಿಯಾಗಿ ಸೇವೆ ಸಲ್ಲಿಸುತ್ತಿದ್ದು, ಈ ಕುರಿತು ದಾಖಲೆಗಳನ್ನು ವೈಯಕ್ತಿಕವಾಗಿ ಅವರು ಹಸ್ತಾಂತರ ಮಾಡಿದ್ದರು.
ಈ ದುಃಖ ಮತ್ತು ನೋವಿನ ಭಾವನಾತ್ಮಕ ಕ್ಷಣದ ನಡುವೆ ಡಿಜಿಪಿ, 20 ವರ್ಷಗಳಿಂದ ಬೆಂಬಲ ಮತ್ತು ಮನ್ನಣೆಗೆ ಕಾದು ಕುಳಿತಿದ್ದ ಸಂತ್ರಸ್ತ ಕುಟುಂಬದ ಜೊತೆ ಮಾತುಕತೆ ನಡೆಸಿದ್ದರು.
ಈ ವೇಳೆ ಮಾತನಾಡಿದ ಅಧಿಕಾರಿಗಳು, ಗ್ರೇಹೌಂಡ್ಸ್ ಸಿಬ್ಬಂದಿಗಳ ಧೈರ್ಯವನ್ನು ಪ್ರಶಂಸಿದ್ದು, ಅವರ ಇತ್ತೀಚಿನ ಸಾಧನೆಯನ್ನು ತಿಳಿಸಿದರು. 024 ರ ವಿಶೇಷ ಕಾರ್ಯಾಚರಣೆಗಳಲ್ಲಿ ಶ್ರೇಷ್ಠತೆಗಾಗಿ ಕೇಂದ್ರ ಗೃಹ ಸಚಿವರ ಪದಕವನ್ನು ಪಡೆದ ಗ್ರೇಹೌಂಡ್ಸ್ ಕಮಾಂಡರ್ ರಾಘವೇಂದ್ರ ರೆಡ್ಡಿ, ಹಿರಿಯ ಕಮಾಂಡೋಗಳಾದ ತಿಪ್ಪಾಣಿ ರಾಕೇಶ್ ಮತ್ತು ಉದತನೂರಿ ಮಲ್ಲಯ್ಯ; ಮತ್ತು ಜೂನಿಯರ್ ಕಮಾಂಡೋ ಗಂಟಾ ಸಾಯಿಕುಮಾರ್ ಸೇರಿದಂತೆ ಅಧಿಕಾರಿಗಳನ್ನು ಅವರು ಅಭಿನಂದಿಸಿದರು.
ಪ್ರತ್ಯೇಕ ಮಾತುಕತೆಯಲ್ಲಿ ಅವರು ಸದ್ಯ ಹೆಚ್ಚುತ್ತಿರುವ ಸೈಬರ್ ಅಪರಾಧವನ್ನು ಹತ್ತಿಕ್ಕಬೇಕಿದೆ ಎಂದು ಒತ್ತಿ ಹೇಳಿದರು. ತೆಲಂಗಾಣ ಸೈಬರ್ ಭದ್ರತೆ ಬ್ಯೂರೋ ಇತ್ತೀಚಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ಜನರಿಗೆ ಸೈಬರ್ ಅಪರಾಧ ಕುರಿತು ಜಾಗೃತಿ ಮೂಡಿಸಬೇಕಿದ್ದು, ಜನರು ಎಚ್ಚರಿದಿಂದ ಇರುವಂತೆ ತಿಳಿಸಿದರು. ಮಾಧ್ಯಮಗಳು ಈ ರೀತಿ ಜಾಗೃತಿಯಲ್ಲಿ ಪ್ರಮುಖವಾಗಿದ್ದು, ಸೈಬರ್ ಬೆದರಿಕೆ ಕುರಿತು ಹೆಚ್ಚಿನ ಅರಿವು ಮೂಡಿಸಬೇಕು ಎಂದು ಒತ್ತಾಯಿಸಿದರು.
