ಉದಯವಾಹಿನಿ, ಮೈಸೂರು : ದೇಶದ ಸ್ವಚ್ಛ ನಗರಿ ಹಾಗೂ ವಿಶಾಲವಾದ ರಸ್ತೆಗಳನ್ನು ಹೊಂದಿರುವ ನಗರಗಳಲ್ಲಿ ಒಂದಾದ ಅರಮನೆ ನಗರಿಯಲ್ಲಿ ಈಗ ಟ್ರಾಫಿಕ್ ಸಿಗ್ನಲ್​ಗಳಿಂದಾಗಿ ಹೊಸದಾಗಿ ಟ್ರಾಫಿಕ್ ಜಾಮ್ ಕಿರಿ ಕಿರಿ ಉಂಟಾಗಿದೆ. ಅವೈಜ್ಞಾನಿಕವಾಗಿ ಟ್ರಾಫಿಕ್ ಸಿಗ್ನಲ್​ಗಳನ್ನು ಹಾಕಿರುವುದೇ ಟ್ರಾಫಿಕ್ ಜಾಮ್​ಗೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅವರ ಅಭಿಪ್ರಾಯದ ಪ್ರತ್ಯಕ್ಷ ವರದಿ ಇಲ್ಲಿದೆ.

ಅರಮನೆ ನಗರಿ ಮೈಸೂರು ರಾಜರ ದೂರದೃಷ್ಟಿಯಿಂದ ವಿಶಾಲವಾದ ರಸ್ತೆಗಳನನ್ನು ಹೊಂದಿದೆ. ಪ್ರವಾಸಕ್ಕೆ ಬರುವ ಜನರು ಮೈಸೂರಿನ ನಗರಗಳ ರಸ್ತೆಗಳನ್ನು ನೋಡಿ ಈ ನಗರದ ವ್ಯವಸ್ಥೆ ಬಗ್ಗೆ ಸಂತೋಷ ವ್ಯಕ್ತಪಡಿಸುತ್ತಿದ್ದರು. ಆದರೆ, ಇತ್ತೀಚಿಗೆ ಸಂಚಾರ ದಟ್ಟಣೆಯನ್ನ ಕಡಿಮೆ ಮಾಡುವ ಉದ್ದೇಶದಿಂದ ಅವೈಜ್ಞಾನಿಕ ಮತ್ತು ಅನಾವಶ್ಯಕ ಹೊಸ ಟ್ರಾಫಿಕ್ ಸಿಗ್ನಲ್​ಗಳನ್ನು ಅಳವಡಿಸಲಾಗಿದೆ. ಹೀಗಾಗಿ, ಟ್ರಾಫಿಕ್ ಕಿರಿ ಕಿರಿ ಉಂಟಾಗಿದೆ ಎನ್ನುವುದು ಜನರ ದೂರಾಗಿದೆ.

43 ವೃತ್ತಗಳಲ್ಲಿ ಹೊಸ ಟ್ರಾಫಿಕ್ ಸಿಗ್ನಲ್ : ಕಳೆದ ವರ್ಷ 2025ಕ್ಕೂ ಮೊದಲು ಇಡೀ ಮೈಸೂರು ನಗರದಲ್ಲಿ 53 ಟ್ರಾಫಿಕ್ ಸಿಗ್ನಲ್​ಗಳಿದ್ದವು. ಆದರೆ, ಕಳೆದ 6 ತಿಂಗಳಿನಿಂದ 43 ವೃತ್ತಗಳಲ್ಲಿ ಎಐ ಚಾಲಿತ ಆಧುನಿಕ ಹೊಸ ಟ್ರಾಫಿಕ್ ಸಿಗ್ನಲ್​ಗಳನ್ನು ಅಳವಡಿಸಲಾಗಿದೆ. ಇವು ಟ್ರಾಫಿಕ್ ಜಾಮ್​ಗೆ ಕಾರಣವಾಗಿವೆ. ಮೈಸೂರು ರೈಲ್ವೆ ನಿಲ್ದಾಣದಿಂದ ಜೆಎಲ್​ಬಿ ರಸ್ತೆಯ ಮೂಲಕ ಆರ್​ಟಿಒ ಸರ್ಕಲ್​ವರೆಗೆ ಸುಮಾರು 2 ಕಿ. ಮೀ. ದೂರದ ದಾರಿಗೆ 6 ಟ್ರಾಫಿಕ್ ಸಿಗ್ನಲ್​ಗಳಿವೆ. ವಾಹನ ಸವಾರರು 5 ನಿಮಿಷದಲ್ಲಿ ಸಾಗುವ ದಾರಿ ಇದಾಗಿದೆ. ಆದರೆ, ಅವರು ಟ್ರಾಫಿಕ್​ನಲ್ಲಿ ಸಿಕ್ಕಿಕೊಂಡರೆ ಪ್ರಯಾಣಿಸಲು ಅರ್ಧ ಗಂಟೆ ಸಮಯ ಬೇಕಾಗುತ್ತದೆ.

Leave a Reply

Your email address will not be published. Required fields are marked *

error: Content is protected !!