ಉದಯವಾಹಿನಿ, ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಗೃಹ ಬಳಕೆ ಸಿಲಿಂಡರ್ಗಳನ್ನ ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದ ಹಿನ್ನೆಲೆ 247 ಸಿಲಿಂಡರ್ಗಳನ್ನ ಜಪ್ತಿ ಮಾಡಲಾಗಿದೆ. ಈ ಕುರಿತು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಜಿ.ಪ್ರಭು ಮಾಹಿತಿ ನೀಡಿದ್ದಾರೆ. ಬಾಗೇಪಲ್ಲಿಯಲ್ಲಿ 13, ಚಿಕ್ಕಬಳ್ಳಾಪುರ 71, ಚಿಂತಾಮಣಿ 26, ಗೌರಿಬಿದನೂರು 36, ಗುಡಿಬಂಡೆ 68, ಶಿಡ್ಲಘಟ್ಟ 31, ಚೇಳೂರಿನಲ್ಲಿ 2 ಸಿಲಿಂಡರ್ಗಳನ್ನು ಜಪ್ತಿ ಮಾಡಲಾಗಿದೆ.
214 ಗೃಹಬಳಕೆ ಸಿಲಿಂಡರ್ಗಳು ಹಾಗೂ 33 ವಾಣಿಜ್ಯ ಸಿಲಿಂಡರ್ಗಳನ್ನ ಜಪ್ತಿ ಮಾಡಲಾಗಿದೆ. ಇನ್ನೂ ಗೃಹಬಳಕೆ ಸಿಲಿಂಡರ್ಗಳನ್ನ ವಾಣಿಜ್ಯ ಉದ್ದೇಶಕ್ಕೆ ಬಳಸಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು, ಶಾಶ್ವತವಾಗಿ ಸಿಲಿಂಡರ್ ಮಂಜೂರಾತಿ ಸಹ ರದ್ದಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
