ಉದಯವಾಹಿನಿ, ಸಾಗರ್ (ಉತ್ತರ ಪ್ರದೇಶ): ಅಕ್ಕಿ ಮೇಲಿನ ಹೊಟ್ಟನ್ನು ನಾವು ವ್ಯರ್ಥ ಎಂದು ಬಿಸಾಡುತ್ತೇವೆ. ಇಲ್ಲವೇ, ಜಾನುವಾರುಗಳಿಗೆ ಆಹಾರವಾಗಿ ನೀಡುತ್ತೇವೆ. ಆದರೆ, ಅದರಲ್ಲಿ ಕ್ಯಾನ್ಸರ್​ ತಡೆಯುವ ಅಂಶವಿದೆ ಎಂಬುದು ನಮಗೆ ಗೊತ್ತಿಲ್ಲ. ಇದೇ ವಿಷಯವಾಗಿ ಉತ್ತರಪ್ರದೇಶದ ಬನಾರಸ್​ ಹಿಂದೂ ವಿಶ್ವವಿದ್ಯಾಲಯ (ಬಿಹೆಚ್​​ಯು) ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ.
ಹೌದು. ಇಂಥದ್ದೊಂದು ಅಪರೂಪದ ಮತ್ತು ಮಹತ್ವದ ಸಂಶೋಧನೆಯು ಅಮೆರಿಕದ ಕೊಲೊರಾಡೋ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಡೆಯುತ್ತಿದೆ. ಆರಂಭಿಕ ಹಂತದಲ್ಲಿ ಅದರ ಔಷಧವನ್ನು ಇಲಿಗಳ ಮೇಲೆ ಪ್ರಯೋಗಿಸಲಾಗಿದೆ. 2023 ರಿಂದ ಈ ಸಂಶೋಧನೆಯು ನಡೆಯುತ್ತಿದೆ.

ಅಕ್ಕಿಯನ್ನು ಸಂಸ್ಕರಿಸಿದ ಬಳಿಕ ಬರುವ ತ್ಯಾಜ್ಯವಾದ ತೌಡನ್ನು ಬಳಸಿ ಕೊಲೊರೆಕ್ಟಲ್ ಕ್ಯಾನ್ಸರ್ (CRC) ತಡೆಗಟ್ಟಬಹುದು ಎಂಬುದು ವಿಜ್ಞಾನಿಗಳ ಸಂಶೋಧನೆ. ಈ ಸಂಶೋಧನೆಯ ಲೇಖಕರಲ್ಲಿ ಒಬ್ಬರಾದ ಬಿಹೆಚ್‌ಯು ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಖಿಲೇಂದ್ರ ಮೌರ್ಯ ಅವರು ಸಾಗರ್ ವಿಶ್ವವಿದ್ಯಾಲಯದಲ್ಲಿ ನಡೆದ ಉಪನ್ಯಾಸವೊಂದರಲ್ಲಿ ಈ ಅಧ್ಯಯನದ ಕುರಿತು ಮಾಹಿತಿ ಹಂಚಿಕೊಂಡರು. ಅಕ್ಕಿ ತೌಡಿನ ಸೇವನೆಯು ಕರುಳಿನ ಸೂಕ್ಷ್ಮಜೀವಿಗಳಲ್ಲಿ ಸಕಾರಾತ್ಮಕ ಬದಲಾವಣೆ ತರುವ ಮೂಲಕ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಕ್ಯಾನ್ಸರ್ ಮಾದರಿಗಳಲ್ಲಿ ಗಡ್ಡೆಗಳ ಬೆಳವಣಿಗೆಯನ್ನು ನಿಯಂತ್ರಿಸಲು ಸಹಕಾರಿಯಾಗಬಹುದು ಎಂದು ಸಂಶೋಧನೆಯಲ್ಲಿ ಗಮನಿಸಿದ್ದಾಗಿ ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!