
ಉದಯವಾಹಿನಿ, ಬೀದರ್ :ಚಿಂತಾಕಿ – ಔರಾದ್ ರಸ್ತೆಯಲ್ಲಿರುವ ನಾಗಮಾರಪಳ್ಳಿ ಅವರ ಜಮೀನಿನ ಬಳಿಯಲ್ಲಿ ಬೈಕ್ ಮೇಲೆ ಸಾಗಿಸುತ್ತಿದ್ದ 22 ಲಕ್ಷ 6,500 ರೂ. ಮೌಲ್ಯದ 22 ಕೆಜಿ 650 ಗ್ರಾಂ. ಗಾಂಜಾ, 30 ಸಾವಿರ ಮೌಲ್ಯದ ದ್ವಿಚಕ್ರ ವಾಹನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಎಸ್ಪಿ ಚನ್ನಬಸವಣ್ಣ, ಎಎಸ್ಪಿ ಮಹೇಶ ಮೇಘಣ್ಣನವರ, ಎಎಸ್ಪಿ ಪೃಥ್ವಿಕ ಶಂಕರ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಕಾರ್ಯಚರಣೆ ಮಾಡಿದ ಔರಾದ್ ಸಿಪಿಐ ಮಲ್ಲಿಕಾರ್ಜುನ ಇಕ್ಕಳಕಿ, ಪಿಎಸ್ ಐ ಸಿದ್ದಲಿಂಗ, ಎಎಸ್ ಐ ಸುನೀಲಕುಮಾರ ಕೋರಿ, ಪೊಲೀಸ್ ಪೇದೆಗಳಾದ ಶಿವಕುಮಾರ ಸ್ವಾಮಿ, ಅರುಣಸಿಂಗ್, ಸದೋಜಾತ, ಸಿದ್ದೇಶ್ವರ, ಗುರುಲಿಂಗ, ಪ್ರಕಾಶ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಕಮಲನಗರ ನಿವಾಸಿ ಎಂದು ಗುರುತಿಸಲಾಗಿದೆ. ನಂತರ ಘಟನಾ ಸ್ಥಳಕ್ಕೆ ತಹಸೀಲ್ದಾರ ಮಲ್ಲಶೆಟ್ಟಿ ಚಿದ್ರೆ ಭೇಟಿ ನೀಡಿ ಪಂಚನಾಮೆ ಮಾಡಿದರು. ಈ ಕುರಿತು ಚಿಂತಾಕಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
