ಉದಯವಾಹಿನಿ, ಶ್ರೀನಗರ: ಬಹುತೇಕ ಭಾರತೀಯ ಮುಸ್ಲಿಮರು ಮತಾಂತರವಾಗುವುದಕ್ಕೆ ಮೊದಲು ಹಿಂದೂಗಳಾಗಿದ್ದರು.ಇಲ್ಲಿನ ಬಹುತೇಕ ಕಾಶ್ಮೀರಿ ಪಂಡಿತರು ಇಸ್ಲಾಮ್ಗೆ ಮತಾಂತರಗೊಂಡಿದ್ದಾರೆ ಎಂದು ಪ್ರಜಾಸತ್ತಾತ್ಮಕ ಪ್ರಗತಿಪರ ಆಜಾದ್ ಪಕ್ಷದ (ಡಿಪಿಎಪಿ) ಮುಖ್ಯಸ್ಥ ಗುಲಾಂ ನಬಿ ಆಜಾದ್ ಹೇಳಿದ್ದಾರೆ.ದೋಡಾ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಕಾಶ್ಮೀರ ಕಣಿವೆಯಲ್ಲಿ ಈ ಮಾತಿಗೆ ನಿದರ್ಶನ ಕಾಣಬಹುದು.ಕೆಲ ಮುಸ್ಲಿಮರು ಹೊರಗಿನಿಂದ ಬಂದಿದ್ದಾರೆ ಎಂಬುದಾಗಿ ಬಿಜೆಪಿಯ ಕೆಲ ನಾಯಕರು ಹೇಳಿದ್ದಾರೆ. ಹೊರಗಿನಿಂದಾಗಲಿ, ಒಳಗಿನಿಂದಾಗಲಿ ಇಲ್ಲಿಗೆ ಬಂದವರು ಇಲ್ಲ. ಇಸ್ಲಾಂ ೧,೫೦೦ ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಧರ್ಮ. ಹಿಂದೂ ಧರ್ಮ ಅತ್ಯಂತ ಪ್ರಾಚೀನವಾದುದು. ಹೀಗಾಗಿ ಮುಸ್ಲಿಮರ ಪೈಕಿ ೧೦-೨೦ ಮಂದಿ ಹೊರಗಿನಿಂದ ಬಂದವರಿರಬಹುದು. ಕೆಲವರು ಮೊಗಲರ ಸೈನ್ಯದಲ್ಲಿ ಇದ್ದಿರಬಹುದು ಎಂದು ಹೇಳಿದ್ದಾರೆ.ಜಮ್ಮು-ಕಾಶ್ಮೀರ ಮುಸ್ಲಿಮರು ೬೦೦ ವರ್ಷಗಳ ಹಿಂದೆ ಏನಾಗಿದ್ದರು ಎಂದು ಪ್ರಶ್ನಿಸಿದ ಅವರು, ಅವರೆಲ್ಲರೂ ಕಾಶ್ಮೀರಿ ಪಂಡಿತರೇ ಆಗಿದ್ದರು. ಇಸ್ಲಾಂಗೆ ಮತಾಂತರವಾದರು. ಆದರೆ, ರಾಜಕೀಯ ಲಾಭಕ್ಕಾಗಿ ಯಾರೂ ಧರ್ಮವನ್ನು ಬಳಸಿಕೊಳ್ಳಬಾರದು. ರಾಜಕೀಯಕ್ಕಾಗಿ ಧರ್ಮವನ್ನು ಬಳಸಿಕೊಳ್ಳುವವರು ದುರ್ಬಲ ವ್ಯಕ್ತಿಗಳು ಎಂದರು.
