
ಉದಯವಾಹಿನಿ ಪೀಣ್ಯ ದಾಸರಹಳ್ಳಿ: ಭಾರತದ ಐತಿಹಾಸಿಕ ಚಂದ್ರಯಾನ_3 ಯಶಸ್ವಿಗೆ ಕಾರಣರಾದ ವಿಜ್ಞಾನಿಗಳ ವೃಂದ ಮಹಿಳಾ ಇಸ್ರೋ ವಿಜ್ಞಾನಿಗಳಾದ ಕಲ್ಪನಾ ಅರವಿಂದ್ ಹಾಗೂ ಆಕಾಂಕ್ಷ ಭಾರದ್ವಾಜ್ ಅವರಿಗೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಮುನಿರಾಜು ಅವರ ಧರ್ಮ ಪತ್ನಿ ಹಾಗೂ ಕ್ಷೇತ್ರದ ಬಿಜೆಪಿ ಹಿರಿಯ ನಾಯಕಿ ಸುಜಾತ ಎಸ್.ಮುನಿರಾಜು ಅವರು ಈ ಇಬ್ಬರು ಮಹಿಳಾ ವಿಜ್ಞಾನಿಗಳಿಗೆ ಹೂವು ಗುಚ್ಚು ನೀಡಿ ಸಿಹಿ ತಿನ್ನಿಸಿ ಅಭಿನಂದಿಸಿ ಶುಭ ಹಾರೈಸಿದರು.
ಕ್ಷೇತ್ರದ ಬಿಜೆಪಿ ಮಹಿಳೆಯರು ಮಹಿಳಾ ಕಾರ್ಯಕರ್ತರು ಸುಜಾತ ಮುನಿರಾಜು ಅವರಿಗೆ ಸಾಥ್ ನೀಡಿದರು.
