ಉದಯವಾಹಿನಿ ಮುದಗಲ್ಲ :ವೆಂಕಟರಾಯನಪೇಟೆಯ ಮಾರುತೇಶ್ವರ ಜಾತ್ರಾ ಮಹೋತ್ಸವವು ಶ್ರಾವಣ ಮಾಸದ ಕೊನೆ ಸೋಮವಾರದಂದು ಸಂಪನ್ನಗೊಂಡಿತು.ಬೆಳಗ್ಗೆ ದೇಗುಲದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಮಹಿಳೆ ಯರಿಂದ ಕಳಶದ ಮೆರವಣಿಗೆ ನಡೆಯಿತು. ಸಂಜೆ ಕಳಸಾರೋಹಣ ಕಾರ್ಯಕ್ರಮ ಜರುಗಿತು. ನಾನಾ ಸಾಂಸ್ಕೃತಿಕ ತಂಡಗಳು ಮೆರವಣಿಗೆಗೆ ಮೆರಗು ತಂದವು. ಅಲಂಕೃತ ವಾಹನದಲ್ಲಿ ಆಂಜನೇಯನ ಭಾವಚಿತ್ರ ಪ್ರತಿಷ್ಠಾಪಿಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಮಾಡಲಾಯಿತು.
ಮಾರುತೇಶ್ವರನಿಗೆ ಪ್ರಸಿದ್ಧ ಮಸಾಲೆ ಪದಾರ್ಥ ವಾದ ಏಲಕ್ಕಿಯಿಂದ ಹಾರವನ್ನು ಹಾಕಲಾಗಿದ್ದು ಭಕ್ತರಾದ ವಿಜಯ ಕುಮಾರ್ ಕುದರಿ (ಪೋಲಿಸ್ ಇಲಾಖೆ ) ಅವರು ತರಿಸಿದ್ದಾರೆ ಮಾರುತೇಶ್ವರ ನಿಗೆ ಏಲಕ್ಕಿ ಹಾರ ಹಾಕಿ ಅಲಂಕಾರ ಮಾಡಲಾಗಿದೆ. ಈ ಸಂದರ್ಭದಲ್ಲಿ ,, ದುರುಗಪ್ಪ ಕಟ್ಟಿಮನಿ,ಆನಂದ ಪೇಂಟರ್, ಬಸವರಾಜ ಬಂಕದಮನಿ, ಪರಶುರಾಮ್‌ ಕಟ್ಟಿಮನಿ , ಶರಣಪ್ಪ ಕಟ್ಟಿಮನಿ, ವೆಂಕಟೇಶ, ರವಿ ಕಟ್ಟಿಮನಿ, , ವೆಂಕಟೇಶ ಹಿರೇಮನಿ, ರಾಘ ಕುದುರಿ, ಮೌನೇಶ ಭಂಡಾರಿ ,ಹುಲೇಶ ,ರಾಮಪ್ಪ ಬಂಕದ  ಮನಿ ಸೇರಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!