ಉದಯವಾಹಿನಿ, ಚಂಡೀಗಢ: ಪಂಜಾಬ್‌ನಲ್ಲಿ ರೈತರು ನಡೆಸುತ್ತಿರುವ ರೈಲು ಮುಷ್ಕರ ೩ನೇ ದಿನವೂ ಮುಂದುವರಿದಿದೆ. ರೈತರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರು ಅಮೃತಸರ, ಜಲಂಧರ್ ಕಂಟೋನ್ಮಂಟ್ ಸೇರಿದಂತೆ ೧೨ ಸ್ಥಳಗಳಲ್ಲಿ ರೈಲು ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಆಂದೋಲನದಿಂದ ರೈಲ್ವೇ ಇಲಾಖೆ ಹಾಗೂ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ.
ಪಂಜಾಬ್‌ನ ವಿವಿಧ ಜಿಲ್ಲೆಗಳಲ್ಲಿ ರೈತರು ರೈಲು ಹಳಿಗಳ ಮೇಲೆ ಕುಳಿತುಕೊಂಡಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಭದ್ರತೆಗೆ ಸಂಬಂಧಿಸಿದಂತೆ ರೈಲ್ವೆ ಮಾರ್ಗಸೂಚಿ ಸಿದ್ಧಪಡಿಸಿದೆ. ಇದರ ಅಡಿಯಲ್ಲಿ, ಅನೇಕ ರೈಲುಗಳನ್ನು ರದ್ದುಗೊಳಿಸಲಾಯಿತು ಮತ್ತು ಹಲವಾರು ರೈಲು ಮಾರ್ಗಗಳನ್ನು ಬದಲಾಯಿಸಲಾಗಿದೆ.
ಆಂದೋಲನದಿಂದಾಗಿ, ಹರಿಯಾಣ, ಪಂಜಾಬ್ ಮತ್ತು ದೆಹಲಿ ನಡುವೆ ಚಲಿಸುವ ಇತರ ಹಲವು ರೈಲುಗಳ ಮೇಲೂ ಪರಿಣಾಮ ಬೀರಿದ್ದು,ಈ ಕುರಿತು ರೈಲ್ವೆ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರೈಲ್ವೇ ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ ೪೪ ರೈಲುಗಳನ್ನು
ರದ್ದುಗೊಳಿಸಲಾಗಿದೆ. ೨೦ ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದ್ದು, ೨೦ಕ್ಕೂ ಹೆಚ್ಚು ರೈಲುಗಳ ಮಾರ್ಗವನ್ನು ಮೊಟಕುಗೊಳಿಸಲಾಗಿದ್ದು, ಇದರಿಂದ ಪಂಜಾಬ್ ಮಾತ್ರವಲ್ಲದೆ ಹರಿಯಾಣ, ದೆಹಲಿ, ಉತ್ತರ ಪ್ರದೇಶ, ಉತ್ತರಾಖಂಡ ಸೇರಿದಂತೆ ಹಲವು ರಾಜ್ಯಗಳ ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದಾರೆ.
ಹೋಶಿಯಾರ್‌ಪುರ, ಗುರುದಾಸ್‌ಪುರದ ಬಟಾಲಾ, ಜಲಂಧರ್ ಕ್ಯಾಂಟ್, ತರನ್ ತರನ್, ಸುನಮ್, ನಭಾ, ಬಸ್ತಿಯಲ್ಲಿ ರೈತರು ಹಳಿಗಳ ಮೇಲೆ ಕುಳಿತಿದ್ದಾರೆ. ಇದಲ್ಲದೆ, ಫಿರೋಜ್‌ಪುರದ ಟ್ಯಾಂಕ್‌ವಾಲಿ ಮತ್ತು ಮಲ್ಲನ್‌ವಾಲಾ, ಬಟಿಂಡಾದ ರಾಮ್‌ಪುರ ಮತ್ತು ಅಮೃತಸರದ ದೇವಿದಾಸ್‌ಪುರದಲ್ಲೂ ಜನರು ರೈಲು ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!