
ಉದಯವಾಹಿನಿ,ಇಂಡಿ: ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಶ್ರೀ ಸಿದ್ಧಲಿಂಗ ಮಹಾರಾಜರ 96 ನೇ ಪುಣ್ಯಸ್ಮರಣೆಯ ಅಂಗವಾಗಿ ಶುಕ್ರವಾರ 151 ಕುಂಭ ಮೇಳದೊಂದಿಗೆ ಎತ್ತಿನ ಬಂಡಿಯಲ್ಲಿ ಶ್ರೀ ಸಿದ್ಧಲಿಂಗ ಮಹಾರಾಜರ ಭಾವಚಿತ್ರದ ಭವ್ಯ ಮೆರವಣ ಗೆ ನಡೆಯಿತು.ಬಂಥನಾಳದ ಶ್ರೀ ವೃಷಭಲಿಂಗ ಮಹಾಶಿವಯೋಗಿಗಳ ಸಾನಿಧ್ಯದಲ್ಲಿ ಇಲ್ಲಿನ ಕಮರಿಮಠದಿಂದ ಆರಂಭವಾದ ಈ ಭವ್ಯ ಮೆರವಣ ಗೆಗೆ ಹೂವಿನ ಹಿಪ್ಪರಗಿಯ ಪತ್ರಿವನ ಮಠದ ದ್ರಾಕ್ಷಾಯಣ ಅಮ್ಮನವರು ಚಾಲನೆ ನೀಡಿದರು.ಬಳಿಕ ಈ ಮೆರವಣ ಗೆಯು ಭಕ್ತರ ಜಯಘೋಷಗಳ ನಡುವೆ ವಿಬೃಂಭಣೆಯಿoದ ಪುರ ಪ್ರವೇಶಗೊಂಡಿತು. ಈ ಮೆರವಣ ಗೆಯಲ್ಲಿ ಪಾಲ್ಗೊಂಡ ಮಹಿಳೆಯರು ಪೂರ್ಣಕುಂಭ ಹೊತ್ತು, ಓಂ ನಮ: ಶಿವಾಯ ನಮ: ಎಂಬ ಮಂತ್ರ ಪಠಣದೊಂದಿಗೆ ಹೆಜ್ಜೆ ಹಾಕಿದರು.
ನಂತರ ಈ ಮೆರವಣ ಗೆಯು ಮರಳಿ ಕಮರಿಮಠದತ್ತ ಆಗಮಿಸುತ್ತಿದ್ದಂತೆ ಭಕ್ತರ ಸಂಭ್ರಮ ಮುಗಿಲು ಮುಟ್ಟಿತು. ಹಲವು ಯುವಕರು ಜೈಕಾರ ಹಾಕಿದರೆ, ಮತ್ತೆ ಕೆಲ ಯುವಕರು ಪಟಾಕ್ಷಿ ಸಿಡಿಸಿ ಸಂಭ್ರಮಿಸಿದರು. ಕುಂಭ ಮೇಳ ಕಮರಿಮಠ ಪ್ರವೇಶಿಸಿ ಬಳಿಕ ಶ್ರೀ ಸಿದ್ಧಲಿಂಗ ಮಹಾರಾಜರ ಶಿಲಾಮೂರ್ತಿಗೆ ಕುಂಭಾಭಿಷೇಕ ನೆರವೇರಿತು.ಈ ಕುಂಭೋತ್ಸವಕ್ಕೆ ಚಾಲನೆ ನೀಡಿದ ಹೂವಿನ ಹಿಪ್ಪರಗಿಯ ಪತ್ರಿವನ ಮಠದ ಮಾತೋಶ್ರೀ ದ್ರಾಕ್ಷಾಯಣ ಅಮ್ಮನವರು ಮಾತನಾಡಿ, ಶ್ರೀ ಸಿದ್ಧಲಿಂಗ ಮಹಾರಾಜರ ಮಹಿಮೆ ಅಪಾರ, ಅವರ 96 ನೇ ಪುಣ್ಯಾರಾಧನೆಯ ಅಂಗವಾಗಿ ಗ್ರಾಮದಲ್ಲಿ ಕುಂಭೋತ್ಸವ ಜರುಗುತ್ತಿರುವ ಹೆಮ್ಮೆಯ ಸಂಗತಿ ಎಂದಿದರು .
