
ಉದಯವಾಹಿನಿ,ಚಿಂಚೋಳಿ: ಮಾಜಿ ಸಚಿವ ದಿ.ವೈಜೀನಾಥ ಪಾಟೀಲ ರವರ ಸಹೋದರ ಕಾಂಗ್ರೆಸ್ ಮುಖಂಡ ಬಾಬುರಾವ ಪಾಟೀಲ ಚಂದಾಪೂರ ಅವರ ಮನೆ ಮೇಲೆ ಹೈದರಾಬಾದ್ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಬೆಳಿಗ್ಗೆ ದಾಳಿ ನಡೆಸಿದ್ದಾರೆ.ಇಡಿಯ ನಾಲ್ವರ ಅಧಿಕಾರಿಗಳ ತಂಡ ಹಾಗೂ ನಾಲ್ಕು ಜನ ಕೇಂದ್ರಿಯ ಮೀಸಲು ಪಡೆಯ ನಾಲ್ವರು ಯೋಧರ ನೇತೃತ್ವದಲ್ಲಿ ದಾಳಿ ನಡೆಸಿ ಚಿಂಚೋಳಿ ಶುಗರ್ಸ್ ಅಂಡ್ ಬಯೋ ಇಂಡಸ್ಟ್ರೀಸ್ ಸಂಬಂಧಿಸಿದ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಕರ್ನಾಟಕ ಪೋಲೀಸ್ ಮೂಲಗಳಿಂದ ತಿಳಿದು ಬಂದಿದೆ.ನೆರೆ ರಾಜ್ಯದ ನೋಂದಣಿ ಹೊಂದಿರುವ ಖಾಸಗಿ ಇನ್ನೋವಾ ಕಾರುಗಳಲ್ಲಿ ಬಂದ ತಂಡದ ಅಧಿಕಾರಿಗಳು ದಾಳಿ ನಡೆಸುತ್ತಿದ್ದು ಯಾರನ್ನು ಒಳಗೆ ಬಿಡುತ್ತಿಲ್ಲಾ ಎಂದು ತಿಳಿದು ಬಂದಿರುತ್ತದೆ. ಸುದ್ದಿ ತಿಳಿದು ಡಿವೈಎಸ್ಪಿ ಕೆ.ಬಸವರಾಜ,ಸಿಪಿಐ ಅಂಬರಾಯ ಕಮಾನಮನಿ,ಪಿಎಸ್ಐ ಎ.ಎಸ್ ಪಟೇಲ ಅನೇಕರು ಸ್ಥಳಕ್ಕೆ ಧಾವಿಸಿದ್ದಾರೆ.
