
ಉದಯವಾಹಿನಿ,ಚಿಂಚೋಳಿ: ತಾಲ್ಲೂಕಿನ ಸುಲೇಪೇಟ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಕೋ-ಆಪ್ಟ್ ಆದೇಶದಂತೆ ಮಲ್ಲಿಕಾರ್ಜುನ ಗೌಡಪ್ಪ ಪೆಂಚನಪಳ್ಳಿ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಸಹಕಾರ ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಅತೀಕ ಪಾಶಾ ಹಳಿದರ್ಗಾ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟನೆ ಹೊರಡಿಸಿದ ಅವರು,ಸುಲೇಪೇಟ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘ ನಿ.ಸಂಘದ ಉಪಾಧ್ಯಕ್ಷರಾಗಿದ್ದ ಸೈಯದ್ ಖಾದರ ಅವರ ನಿಧನದಿಂದ ಖಾಲಿ ಇರುವ ಸಂಘದ ನಿರ್ದೇಶಕರ ಸ್ಥಾನಕ್ಕೆ ಈ ಸಂಘದ ಸಾಲಗಾರ ಹಿಂದುಳಿದ ವರ್ಗದ ಒಬ್ಬ ಸದಸ್ಯರನ್ನು ಆಡಳಿತ ಮಂಡಳಿಯ ನಿರ್ದೇಶಕರಾಗಿ ಬಾಕಿ ಉಳಿದ ಆಡಳಿತ ಮಂಡಳಿ ಅವಧಿಗೆ ಮಲ್ಲಿಕಾರ್ಜುನ ಗೌಡಪ್ಪ ಪೆಂಚನಪಳ್ಳಿ ಅವರನ್ನು ನಿರ್ದೇಶಕರಾಗಿ ಕೋ-ಆಪ್ಟ್ ಮಾಡಿ ಸಂಘದ ಆಡಳಿತ ಮಂಡಳಿಗೆ ಆಯ್ಕೆ ಮಾಡಲಾಗಿದೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ಮುಖಂಡರು ಮತ್ತು ಸಹಕಾರಿ ಧುರಿಣರು ಹಾಗೂ ತಾಲ್ಲೂಕಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ರಮೇಶ ಯಾಕಾಪೂರ ಹಾಗೂ ಪಿಕಾರ್ಡ ಬ್ಯಾಂಕ್ ವ್ಯವಸ್ಥಾಪಕ ನಾಗಣ್ಣ ಯೆಲ್ದೆ,ಕೃಷಿ ಪತ್ತಿನ ಸಹಕಾರ ಸಂಘದ ಸಿಇಓ ಅತೀಕಪಾಶಾರವರು ಕೋ.ಆಪ್ಟ್ ಆಗಿ ಆಯ್ಕೆಯಾದ ನಿರ್ದೇಶಕ ಮಲ್ಲಿಕಾರ್ಜುನ ಗೌಡಪ್ಪ ಪೆಂಚನಪಳ್ಳಿಯವರಿಗೆ ಸನ್ಮಾನಿಸಿ ಗೌರವಿಸಲಾಯಿತು.
