ಉದಯವಾಹಿನಿ, ಆನೇಕಲ್: ತಾಲ್ಲೂಕಿನ ಗಡಿ ಭಾಗ ಹೊಸೂರು ಬಳಿ ಇರುವ ಜೀಮಂಗಲಂನಲ್ಲಿ ಪಟಾಕಿ ದುರಂತ ಸಂಭವಿಸಿದ್ದು, ಕಾರ್ಮಿಕರ ಪ್ರಜ್ಞೆಯಿಂದ ಭಾರಿ ದುರಂತ ತಪ್ಪಿದೆ.
ಗೋದಾಮಿನಲ್ಲಿ ಗುರುವಾರ ಹಠಾತ್‌ನೆ ಬೆಂಕಿ ಹೊತ್ತುಕೊಂಡಿದ್ದರಿಂದ ಕಾರ್ಮಿಕರು ಹೊರ ಬಂದಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ದುರಂತದಲ್ಲಿ ಪಟಾಕಿಗಳು ಒಮ್ಮೆಲೆ ಸಿಡಿದಿದ್ದರಿಂದ ಸುತ್ತಮುತ್ತಲ ಗ್ರಾಮಗಳ ಜನರು ಆತಂಕಗೊಂಡರು. ಒಂದೆಡೆ ದಟ್ಟವಾದ ಹೊಗೆ ಮತ್ತೊಂದೆಡೆ ಪಟಾಕಿಗಳ ಶಬ್ದ ಸುತ್ತಮುತ್ತಲಿನ ನಿವಾಸಿಗಳನ್ನು ಘಾಸಿಗೊಳಿಸಿತು. ಅಗ್ನಿಶಾಮಕದಳದ ಸಿಬ್ಬಂದಿ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಚರಣೆ ನಡೆಸಿದರು.
ಕಳೆದ ಅ. 7ರಂದು ಅತ್ತಿಬೆಲೆಯಲ್ಲಿ ಸಂಭವಿಸಿದ ಪಟಾಕಿ ದುರಂತದಲ್ಲಿ 17ಮಂದಿ ಮೃತಪಟ್ಟಿದ್ದರು. ತಮಿಳುನಾಡಿನ ಹೊಸೂರು ಸಮೀಪದಲ್ಲಿಯೂ ಪಟಾಕಿ ದುರಂತ ಸಂಭವಿಸಿತ್ತು.

Leave a Reply

Your email address will not be published. Required fields are marked *

error: Content is protected !!