ಉದಯವಾಹಿನಿ, ತಡಸ: ಹೋಬಳಿ ಸೇರಿದಂತೆ ಸಮೀಪದ ಹಲವೆಡೆಯ ರಸ್ತೆಗಳು ತಗ್ಗು ಗುಂಡಿ ಬಿದ್ದಿದ್ದು ವಾಹನ ಸವಾರರು ಪ್ರಾಣ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವಂತಾಗಿದೆ.ಭಾರಿ ಮಳೆ ಬಂದರೆ ಬೆಣ್ಣೆ ಹಳ್ಳ ಕಾಲುವೆ ತುಂಬಿ ಹರಿಯಲು ಆರಂಭವಾದರೆ ಹೊಲ ಗದ್ದೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಉಂಟಾಗುತ್ತದೆ ಎಂಬ ಆತಂಕ ರೈತರನ್ನು ಕಾಡುತ್ತಿದೆ.
‘ಅಡವಿಸುಮಾಪೂರ ಮಾರ್ಗವಾಗಿ ಹೊನ್ನಾಪುರ ಹಾಗೂ ಎನ್‌ಎಚ್ 4 ಸಂಪರ್ಕಿಸುವ ರಸ್ತೆಯುದ್ದಕ್ಕೂ ತುಗ್ಗು- ಗುಂಡಿಗಳು ಬಿದ್ದಿದ್ದು, ಈಗಾಗಲೇ ಅನೇಕ ಅಪಘಾತಗಳು ಸಂಭವಿಸಿವೆ. ರಸ್ತೆ ಕಾಮಗಾರಿ ನಡೆಸಿ ವರ್ಷ ಗತಿಸುವುದರ ಒಳಗೆ ಹಾಳಾಗುತ್ತವೆ’ ಎಂದು ಈಶ್ವರಗೌಡ ಪಾಟೀಲ್ ತಿಳಿಸಿದರು.
‘ಹೊನ್ನಾಪುರ ಕೆರೆಯ ದಂಡಿಗೆ ಹಚ್ಚಿಕೊಂಡಿರುವ ಮೇಲ್ಸೇತುವೆ ಸಂಪೂರ್ಣವಾಗಿ ಹಾಳಾಗಿದ್ದು, ಅಪಾರ ಪ್ರಮಾಣದ ಮಳೆ ನೀರು ನಿಲ್ಲುತ್ತಿದ್ದು ಕೆರೆ ತುಂಬಿ ಹರಿದರೆ ಸೇತುವೆ ಕುಸಿದು ಬೀಳುವ ಸಾಧ್ಯತೆ ಇದೆ. ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯ ನಿವಾಸಿ ಮಲ್ಲಿಕಾರ್ಜುನ ಒತ್ತಾಯಿಸಿದ್ದಾರೆ.’ಕುನ್ನೂರ ಗ್ರಾಮದಿಂದ ಶ್ಯಾಡಂಬಿ ಹಾಗೂ ಎನ್‌ಎಚ್ 4 ಸಂಪರ್ಕಿಸುವ ರಸ್ತೆಯಲ್ಲಿ ಮೇಲ್ಸೇತುವೆ ಕಾಮಗಾರಿ ಮುಗಿದಿದ್ದು ಹಿಂದೆ ಮುಂದೆ ಡಾಂಬರೀಕರಣ ಕಾಮಗಾರಿ ಆಗದೆ ವಾಹನ ಸವಾರರು ಅಪಘಾತಕ್ಕೀಡಾಗುತಿದ್ದರೆ ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಿ ಹಾಗೂ ಬೆಣ್ಣೆ ಹಳ್ಳದ ಕಾಲುವೆ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ತೊಂದರೆ ಆಗುತ್ತಿದ್ದು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ನಿಂಗರಾಜ ಕಾಳಿ ಒತ್ತಾಯಿಸಿದರು.

Leave a Reply

Your email address will not be published. Required fields are marked *

error: Content is protected !!