ಉದಯವಾಹಿನಿ, ಕೋಟ (ಬ್ರಹ್ಮಾವರ): ಇಲ್ಲಿನ ಜಾಮಿಯ ಜುಮ್ಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಧ್ವಜಾರೋಹಣ ನೆರವೇರಿಸಿದರು.ಅವರು ಮಾತನಾಡಿ, ಸಂಸದನಾಗಿ ಪ್ರಥಮ ಬಾರಿಗೆ ರಾಷ್ಟ್ರಧ್ವಜವನ್ನು ನಮ್ಮೂರಿನ ಮಸೀದಿಯಲ್ಲಿ ಅರಳಿಸಿದ್ದೇನೆಂಬ ಸಂತೋಷ ನನಗಿದೆ.
ಜಾತಿ, ಧರ್ಮ, ವರ್ಗ ಎಲ್ಲವನ್ನು ಮರೆತ, ಹಿರಿಯರ ಶ್ರಮ, ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿ ಇಂದು ನಾವು ನೆಮ್ಮದಿಯ ಬದುಕು ನಡೆಸುತ್ತಿದ್ದೇವೆ. ದೇಶ ಸಮಗ್ರತೆ, ಏಕತೆ, ರಾಷ್ಟ್ರೀಯತೆ, ಒಗ್ಗಟ್ಟಿನಿಂದ ಬದುಕುವ ಅವಕಾಶ ಸಿಕ್ಕಿದೆ.
