ಉದಯವಾಹಿನಿ, ನಾರಾಯಣಪುರ: ಸೋಮವಾರ ಬಸವಸಾಗರ ಜಲಾಶಯದಿಂದ 14 ಸಾವಿರ ಕ್ಯುಸೆಕ್ ನೀರನ್ನು ಕೃಷ್ಣಾನದಿಗೆ ಹರಿಬಿಡಲಾಗುತ್ತಿದೆ ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಪಶ್ಚಿಮಘಟ್ಟ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆ ಆಗುತ್ತಿರುವುದರಿಂದ ಒಳಹರಿವು ಕಡಿಮೆಯಾಗುತ್ತಿದೆ.ಬಸವ ಸಾಗರ ಜಲಾಶಯಕ್ಕೆ ಬರುತ್ತಿರುವ ಒಳಹರಿವನ್ನು ಗಮನಿಸಿ ಹೊರಹರಿವನ್ನು ಕಡಿಮೆ ಮಾಡಲಾಗುತ್ತಿದೆ. ಸೋಮವಾರ ಆಲಮಟ್ಟಿಯ ಜಲಾಶಯದಿಂದ ಬಸವಸಾಗರ ಜಲಾಶಯಕ್ಕೆ 20 ಸಾವಿರ ಕ್ಯುಸೆಕ್ ನೀರು ಬರುತ್ತಿದ್ದು, ನಾರಾಯಣಪುರ ಜಲಾಶಯದ ಎರಡು ಕ್ರಸ್ಟ್‌ಗೇಟ್‌ ಮತ್ತು ಎಂಪಿಸಿಎಲ್ ಮೂಲಕ 14 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ ಎಂದು ಕೆಬಿಜೆಎನ್‌ಎಲ್ ಮೂಲಗಳಿಂದ ತಿಳಿದುಬಂದಿದೆ.
ಗರಿಷ್ಠ ಮಟ್ಟದಲ್ಲಿ ಇಂದು 492.25 ಮೀಟರ್‌ಗೆ ನೀರಿದ್ದು, 33.313 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹಗೊಂಡಿದೆ ಒಳಹರಿವು 20 ಸಾವಿರ ಕ್ಯುಸೆಕ್‌ ಇದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!