ಉದಯವಾಹಿನಿ, ಬೆಂಗಳೂರು: ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾದಂದೆ ಸಿಎಂ ಆಗಿ ಸಿದ್ಧರಾಮಯ್ಯ, ಡಿಸಿಎಂ ಆಗಿ ಡಿ.ಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದರು. ಅವರೊಂದಿಗೆ 8 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಈ ಬೆನ್ನಲ್ಲೇ ಇಂದು 24 ಮಂದಿ ಶಾಸಕರು ಸಚಿವರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಾರೆ.
ಈಗ ಸಚಿವರ ಪ್ರಮಾಣವಚನ ಕಾರ್ಯದ ಬೆನ್ನಲ್ಲೇ ಸಚಿವ ಸಂಪುಟ ಹಂಚಿಕೆಯೂ ಚುರುಕು ಪಡೆದಿದೆ.
ಕಾಂಗ್ರೆಸ್ ಉನ್ನತ ಮೂಲಗಳ ಮಾಹಿತಿಯಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಬೆಂಗಳೂರು ಅಭಿವೃದ್ಧಿ ಮತ್ತು ಜಲಸಂಪನ್ಮೂಲ ಖಾತೆ ನೀಡಲಾಗುತ್ತಿದೆ. ಡಾ.ಜಿ ಪರಮೇಶ್ವರ್ ಗೆ ಗೃಹಖಾತೆ, ಎಂ.ಬಿ ಪಾಟೀಲ್ ಗೆ ಬೃಹತ್ ಕೈಗಾರಿಕೆ, ಹಿರಿಯ ಸಚಿವ ಹೆಚ್ ಕೆ ಪಾಟೀಲ್ ಗೆ ಕಾನೂನು ಮತ್ತು ಸಂಸದೀಯ ಖಾತೆ ಹಂಚಿಕೆಯಾಗುವ ಸಾಧ್ಯತೆ ಇದೆ.ಈಗಾಗಲೇ ಸಚಿವರಿಗೆ ಖಾತೆ ಹಂಚಿಕೆಯ ಬಗ್ಗೆ ಕಾಂಗ್ರೆಸ್ ಹೈಕಮಾಡ್ ಸಿಎಂ ಸಿದ್ಧರಾಮಯ್ಯ ಜೊತೆಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಂದು ಸಂಜೆಯೇ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದಂತ ಪಟ್ಟಿಯನ್ನು ರಾಜ್ಯಪಾಲರಿಗೆ ಸಿಎಂ ಕಚೇರಿಯಿಂದ ರವಾನಿಸಲಾಗುತ್ತಿದೆ ಎನ್ನಲಾಗಿದೆ.
ಸಂಭವನೀಯ ಖಾತೆ ಹಂಚಿಕೆ ಪಟ್ಟಿ ವಿವರ
ಮುಖ್ಯಮಂತ್ರಿ ಸಿದ್ಧರಾಮಯ್ಯ – ವಾರ್ತಾ ಇಲಾಖೆ, ಹಣಕಾಸು, ಆಡಳಿತ ಸುಧಾರಣೆ ಹಾಗೂ ಹಂಚಿಕೆ ಮಾಡದಿರುವಂತ ಇತರೆ ಖಾತೆಗಳು
ಡಾ.ಜಿ.ಪರಮೇಶ್ವರ್ – ಗೃಹ ಖಾತೆ
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ – ಬೆಂಗಳೂರು ಅಭಿವೃದ್ಧಿ ಮತ್ತು ಜಲಸಂಪನ್ಮೂಲ ಖಾತೆ
ಕೆ.ಹೆಚ್ ಮುನಿಯಪ್ಪ – ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ
ಎಂ.ಬಿ ಪಾಟೀಲ್ – ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ
ಜಮೀರ್ ಅಹ್ಮದ್ ಖಾನ್ – ವಕ್ಫ್ ಮತ್ತು ವಸತಿ ಖಾತೆ
ಕೆ.ಜೆ ಜಾರ್ಜ್ – ಇಂಧನ ಖಾತೆ
ರಾಮಲಿಂಗಾರೆಡ್ಡಿ – ಸಾರಿಗೆ
ಪ್ರಿಯಾಂಕ್ ಖರ್ಗೆ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ, ಬಿಟಿ ಖಾತೆ
ಸತೀಶ್ ಜಾರಕಿಹೊಳಿ – ಲೋಕೋಪಯೋಗಿ ಖಾತೆ
ಹೆಚ್ ಕೆ ಪಾಟೀಲ್ – ಕಾನೂನು ಮತ್ತು ಸಂಸದೀಯ ವ್ಯವಾಹರಗಳ ಖಾತೆ
ಚೆಲುವರಾಯಸ್ವಾಮಿ – ಕೃಷಿ
ಕೆ.ವೆಂಕಟೇಶ್ – ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ
ಕೃಷ್ಣ ಭೈರೇಗೌಡ – ಕಂದಾಯ
ಡಾ.ಹೆಚ್.ಸಿ ಮಹದೇವಪ್ಪ – ಸಮಾಜ ಕಲ್ಯಾಣ
ಕೆ.ಎನ್ ರಾಜಣ್ಣ – ಸಹಕಾರ
ಈಶ್ವರ್ ಖಂಡ್ರೆ – ಅರಣ್ಯ
ದಿನೇಶ್ ಗುಂಡೂರಾವ್ – ಅರೋಗ್ಯ ಮತ್ತು ಕುಟುಂಬ ಕಲ್ಯಾಣ
ಶಿವಾನಂದ ಪಾಟೀಲ್ – ಜವಳಿ ಮತ್ತು ಸಕ್ಕರೆ
ಶರಣ ಬಸಪ್ಪ ದರ್ಶನಾಪೂರ- ಸಣ್ಣ ಕೈಗಾರಿಕೆ
ಆರ್ ಬಿ ತಿಮ್ಮಾಪುರ- ಅಬಕಾರಿ ಮತ್ತು ಮುಜರಾಯಿ
ಎಸ್ ಎಸ್ ಮಲ್ಲಿಕಾರ್ಜುನ – ಗಣಿಗಾರಿಕೆ ಮತ್ತು ತೋಟಗಾರಿಕೆ
ಶಿವರಾಜ ತಂಡರಗಿ – ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ
ಮಂಕಾಳೆ ವೈದ್ಯ- ಮೀನುಗಾರಿಕೆ
ಡಾ.ಶರಣ ಪ್ರಕಾಶ್ ಪಾಟೀಲ್ – ಉನ್ನತ ಶಿಕ್ಷಣ
ಲಕ್ಷ್ಮೀ ಹೆಬ್ಬಾಳ್ಕರ್ – ಮಹಿಳಾ ಮತ್ತು ಮಕ್ಕಳ ಕಲ್ಯಾಣ
ರಹೀಂ ಖಾನ್ – ಪೌರಾಡಳಿತ
ಸಂತೋಷ್ ಲಾಡ್ – ಕಾರ್ಮಿಕ ಖಾತೆ
ಡಿ.ಸುಧಾಕರ್ – ಯೋಜನೆ ಮತ್ತು ಸಾಂಖಿಕ ಇಲಾಖೆ
ಭೈರತಿ ಸುರೇಶ್ – ನಗರಾಭೀವೃದ್ಧಿ
ಬೋಸರಾಜ್ – ಸಣ್ಣ ನೀರಾವರಿ
ಮಧು ಬಂಗಾರಪ್ಪ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
ಡಾ.ಎಂ.ಪಿ ಸುಧಾಕರ್ – ವೈದ್ಯಕೀಯ ಶಿಕ್ಷಣ ಖಾತೆ
ಬಿ.ನಾಗೇಂದ್ರ – ಯುವಜನ ಸೇವೆ ಮತ್ತು ಕ್ರೀಢಾ ಇಲಾಖೆ.
