ಉದಯವಾಹಿನಿ, ದಾವಣಗೆರೆ :  ಜಿಲ್ಲೆಯಲ್ಲಿ ಇಂದು ಬೆಳ್ಳಂ ಬೆಳಗ್ಗೆ ಗುಡುಗು ಸಹಿತ ಧಾರಾಕಾರವಾಗಿ ಮಳೆ ಸುರಿಯಿತು. ನಗರದ ಕಳ್ಳ ಕೊಳ್ಳಗಳು ತುಂಬಿ ಹರಿದವು. ನಗರದ ಸರ್ಕಾರಿ ಶಾಲೆಯ ಆವರಣ ಜಲಾವೃತಗೊಂಡವು.ಬೆಳಗಿನ ಜಾವ ೩.೧೫ಕ್ಕೆ ಆರಂಭವಾದ ಮಳೆ ಸತತ ಒಂದು ಗಂಟೆಗಳ ಬಿರುಸಾಗಿ ಸುರಿಯಿತು. ಆವರಾಗೆರೆ ಸರ್ಕಾರಿ ಶಾಲೆಯ ಎದುರು ಮಳೆ ನಿಂತಿದ್ದರಿಂದ ಮಕ್ಕಳಿಗೆ ಶಾಲೆಗೆ ತೆರೆಳಲು ಪ್ರಯಾಸಪಟ್ಟರು.ನಗರದ ಬೇತೂರು ರಸ್ತೆಯ ವೆಂಕಟೇಶ್ವರ ನಗರದ ತಗ್ಗು ಪ್ರದೇಶದ ತಗ್ಗುಪ್ರದೇಶಗಳಲ್ಲಿನ ಮನೆಗಳ ಸುತ್ತ ನೀರು ತುಂಬಿವೆ. ದಾವಣೆಗೆರೆ ನಗರ, ಚನ್ನಗಿರಿ, ಹರಿಹರ, ಮಾಯಕೊಂಡ ಸುತ್ತುಮುತ್ತ ಹಲವಡೆ ಮಳೆಯಾಗಿದೆ.ಜಮೀನುಗಳಲ್ಲಿ ನೀರು ತುಂಬಿದ್ದರಿಂದ ಮೆಕ್ಕೆಜೋಳ ಸೇರಿ ಇತರೆ ಬೆಳೆಗಳು ಜಲಾವೃತಗೊಂಡಿವೆ.

Leave a Reply

Your email address will not be published. Required fields are marked *

error: Content is protected !!