ಉದಯವಾಹಿನಿ, ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬಿಎಂಟಿಸಿ ಪ್ರಯಾಣಿಕರು ಹಾಗೂ ಕಂಡಕ್ಟರ್‌ ನಡುವೆ ವಾಗ್ವಾದ ನಡೆಯುತ್ತಿದ್ದು ಸ್ವಲ್ಪ ಯಾಮಾರಿದ್ದರೂ ಹೋಗುತ್ತಿತ್ತು ಕಂಡಕ್ಟರ್‌ ಪ್ರಾಣ.ನಗರದ ಮೂರು ಕಡೆ ಇಂಥದ್ದೆ ಘಟನೆಗಳು ನಡೆದಿದ್ದು, ಅಂತೆಯೇ ಬಿಎಂಟಿಸಿ ಬಸ್‌‍ನಲ್ಲಿ ಪಾಸ್‌‍ ತೋರಿಸುವ ವಿಚಾರಕ್ಕೆ ಕಂಡಕ್ಟರ್‌ ಸಂಗಪ್ಪ ಮತ್ತು ಪ್ರಯಾಣಿಕ ಹೇಮಂತ್‌ ಎಂಬಾತನ ನಡುವೆ ವಾಗ್ವಾದ ನಡೆದಿದೆ.
ಈ ವೇಳೆ ಕಂಡಕ್ಟರ್‌ ಸಂಗಪ್ಪನ ಹೊಟ್ಟೆಗೆ ಪ್ರಯಾಣಿಕ ಹೇಮಂತ್‌ ಗುದ್ದಿ ಪರಾರಿಯಾಗಿದ್ದ. ಅಂದಿನಿಂದ ಈತ ಕಂಡಕ್ಟರ್‌ ಮೇಲೆ ಜಿದ್ದು ಸಾಧಿಸಲು ಹೊಂಚು ಹಾಕುತ್ತಿದ್ದ.ಟಿನ್ ಫ್ಯಾಕ್ಟರಿ ಬಸ್ ನಿಲ್ದಾಣದಲ್ಲಿ ಕಳೆದ ಶುಕ್ರವಾರ ಮಧ್ಯಾಹ್ನ 2.30ರ ಸುಮಾರಿನಲ್ಲಿ ಕಂಡಕ್ಟರ್ ಸಂಗಪ್ಪ ಊಟ ಮಾಡುತ್ತಿದ್ದ ವೇಳೆ ಆರೋಪಿ ಹೇಮಂತ್ ಕಲ್ಲಿನಿಂದ ಹೊಡೆದು ಪರಾರಿಯಾಗುತ್ತಿದ್ದಾಗ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಸೆ.8ರಂದು ಅತ್ತಿಬೆಲೆಯಿಂದ ಮೆಜೆಸ್ಟಿಕ್‌ಗೆ ಬರುತ್ತಿದ್ದ ವೋಲ್ವೊ ಬಸ್‌‍ ಹೊಸರೋಡ್‌ ಬಸ್‌‍ ನಿಲ್ದಾಣಕ್ಕೆ ಬರುತ್ತಿದ್ದಂತೆ ಕಂಡಕ್ಟರ್‌ಗೆ ಪ್ರಯಾಣಿಕನೊಬ್ಬ ಸ್ಕ್ರೂಡ್ರೈವರ್‌ನಿಂದ ಚುಚ್ಚಲು ಯತ್ನಿಸಿದ್ದ.
ಅ.1ರಂದು ವೈಟ್‌ಫೀಲ್‌್ಡ ಬಳಿಯ ಐಟಿಪಿಎಲ್‌ ಬಸ್‌‍ ನಿಲ್ದಾಣದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಹರ್ಷ ಸಿನ್ಹಾ ಎಂಬ ಯುವಕ ಬಿಎಂಟಿಸಿ ವೋಲ್ವೊ ಬಸ್‌‍ ಕಂಡಕ್ಟರ್‌ ಯೋಗೇಶ್‌ ಮೇಲೆ ಎರಡುಮೂರು ಬಾರಿ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ. ಈ ಮೂರು ಘಟನೆಗಳಿಂದಾಗಿ ಬಿಎಂಟಿಸಿ ಕಂಡಕ್ಟರ್ ಹಾಗೂ ಚಾಲಕರು ಆತಂಕದಲ್ಲೇ ಸೇವೆಯಲ್ಲಿ ತೊಡಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!