ಉದಯವಾಹಿನಿ, ಸಿಂದಗಿ: ಇಂದು ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜದ ಹೋರಾಟದಲ್ಲಿ ಪೋಲೀಸ್ ಲಾಠಿ ಚಾರ್ಜ್ ಖಂಡಿಸಿ ಗೋಲಗೇರಿ ಗ್ರಾಮದಲ್ಲಿ ಪಂಚಮಸಾಲಿ ಸಮಾಜದ ವತಿಯಿಂದ ರಾಜ್ಯ ಹೆದ್ದಾರಿ ಸಂಪೂರ್ಣ ಬಂದ್ ಮಾಡಿ ರಾಜ್ಯ ಸರ್ಕಾರ ವಿರುದ್ಧ ಉಗ್ರವಾಗಿ ಖಂಡಿಸಲಾಯಿತು.
ಈ ಸಂದರ್ಭದಲ್ಲಿ ಹೆದ್ದಾರಿ ಬಂದ್ ಮಾಡಿ ಮಾತನಾಡಿದ ಸಂತೋಷ ಪಾಟೀಲ ಅವರು ಬಡ ಪಂಚಮಸಾಲಿ ಮಕ್ಕಳಿಗೆ ಮೀಸಲಾತಿ ಕೊಡುವ ಸಲುವಾಗಿ ಸುಮಾರು ಐದು ವರ್ಷದಿಂದ ಹೋರಾಟ ಮಾಡ್ತಾ ಇದ್ದೇವು ನಿನ್ನೇ ನಡೆದ ಘಟನೆ ರಾಜ್ಯ ಸರ್ಕಾರ ಲಾಠಿ ಜಾರ್ಜ್ ಮಾಡಿಸಿ ಅನ್ಯಾಯ ಮಾಡಿದ್ದಾರೆ ಮುಂದೆ ದೊಡ್ಡ ಹೋರಾಟ ಮಾಡುತ್ತೇವೆ ಎಷ್ಟು ಜನರಿಗೆ ಲಾಠಿ ಜಾರ್ಜ್ ಮಾಡಿಸುತ್ತಾರೆ ನೋಡೋಣ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು ಸಿದ್ದನಗೌಡ ಪಾಟೀಲ ಗೌಡಣ್ಣ ಆಲಮೇಲ ಪ್ರಭುಗೌಡ ಬಿರಾದಾರ ಮಾತನಾಡಿದರು ಶ್ರೀಶೈಲ್ ಚಳ್ಳಗಿ ಸುನೀಲಗೌಡ ಪಾಟೀಲ ಕುಮಾರಗೌಡ ಪಾಟೀಲ ಪ್ರಕಾಶ್ ಹೊಸಮನಿ ಗೋಲ್ಲಾಳಗೌಡ ಬಿರಾದಾರ ಮುದಕನಗೌಡ ಬಿರಾದಾರ ಮಲಕನಗೌಡ ಪಾಟೀಲ್ ಸಂತೋಷ ರದ್ದೇವಾಡಗಿ ಸುಭಾಸಗೌಡ ಬಿರಾದರ ಓಂಪ್ರಕಾಶ ಬಿರಾದಾರ ಮಾಂತಗೌಡ ಬಿರಾದಾರ ಬಸನಗೌಡ ಮೆಲನಿಮನಿ ಗೋಲ್ಲಾಳ ಮೇಲಿನಮನಿ ಹಾಜರಿದ್ದರು.
