ಉದಯವಾಹಿನಿ, ಲಕ್ನೋ: ಪಾಕಿಸ್ತಾನದ ಐಎಸ್‌‍ಐನೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಬಬ್ಬರ್‌ ಖಾಲ್ಸಾ ಇಂಟರ್ನ್ಯಾಷನಲ್‌ (ಬಿಕೆಐ) ಸಕ್ರಿಯ ಭಯೋತ್ಪಾದಕ ನನ್ನು ಉತ್ತರ ಪ್ರದೇಶ ಎಸ್‌‍ಟಿಎಫ್‌ ಮತ್ತು ಪಂಜಾಬ್‌ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.
ಕೌಶಾಂಬಿ ಜಿಲ್ಲೆಯಿಂದ ಅಮೃತ್‌ಸರದ ಲಜರ್‌ ಮಾಸಿಹ್‌ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಕೌಶಾಂಬಿಯ ಕೊಖ್ರಾಜ್‌ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್‌‍ ಮಹಾನಿರ್ದೇಶಕ ಅಮಿತಾಬ್‌ ಯಶ್‌ ತಿಳಿಸಿದ್ದಾರೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಬಂಧಿತ ಭಯೋತ್ಪಾದಕ ಬಬ್ಬರ್‌ ಖಾಲ್ಸಾ ಇಂಟರ್ನ್ಯಾಷನಲ್‌ (ಬಿಕೆಐ) ನ ಜರ್ಮನಿ ಮೂಲದ ಮಾಡ್ಯೂಲ್‌ನ ಮುಖ್ಯಸ್ಥ ಸ್ವರ್ಣ್‌ ಸಿಂಗ್‌ ಅಲಿಯಾಸ್‌‍ ಜೀವನ್‌ ಫೌಜಿಗಾಗಿ ಕೆಲಸ ಮಾಡುತ್ತಾನೆ ಮತ್ತು ಪಾಕಿಸ್ತಾನ ಮೂಲದ ಐಎಸ್‌‍ಐ ಕಾರ್ಯಕರ್ತರೊಂದಿಗೆ ನೇರ ಸಂಪರ್ಕದಲ್ಲಿದ್ದಾನೆ ಎಂದು ಯಶ್‌ ಹೇಳಿದರು.
ಭಯೋತ್ಪಾದಕನಿಂದ ಕೆಲವು ಸ್ಫೋಟಕ ವಸ್ತುಗಳು ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವಲ್ಲಿ ಯುಪಿ ಎಸ್ಟಿಎಫ್‌ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.ವಶಪಡಿಸಿಕೊಳ್ಳಲಾದ ಪ್ರಕರಣಗಳಲ್ಲಿ ಮೂರು ಸಕ್ರಿಯ ಹ್ಯಾಂಡ್‌ ಗ್ರೆನೇಡ್‌ಗಳು ಹಾಗೂ ಡಿಟೋನೇಟರ್ಗಳು ಸೇರಿವೆ.

Leave a Reply

Your email address will not be published. Required fields are marked *

error: Content is protected !!