ಉದಯವಾಹಿನಿ, ಬೆಂಗಳೂರು: ಅಕ್ಷಯ್​ ಕುಮಾರ್​ ಜೊತೆ ಕೆಲಸ ಮಾಡಲು ಕೆಲವು ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರೆ. ಅಂಥ ನಿರ್ಮಾಪಕರ ಸಾಲಿನಲ್ಲಿ ವಿಪುಲ್​ ಅಮೃತ್​ಲಾಲ್​ ಶಾ ಕೂಡ ಇದ್ದಾರೆ. ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಅವರಿಗೆ ತುಂಬ ಬೇಡಿಕೆ ಇದೆ. ಆದರೂ ಕೂಡ ಇತ್ತೀಚಿನ ವರ್ಷಗಳಲ್ಲಿ ಅವರಿಗೆ ಸತತ ಸೋಲು ಉಂಟಾಗುತ್ತಿದೆ. ಸ್ಕ್ರಿಪ್ಟ್​ ಆಯ್ಕೆಯಲ್ಲಿ ಅವರು ಎಡವುತ್ತಿದ್ದಾರೆ ಎಂಬುದು ನಿಜ. ಅವರು ಮಾಡಿದ ಎಲ್ಲ ಸಿನಿಮಾಗಳೂ ಹೀನಾಯವಾಗಿ ಸೋಲುತ್ತಿವೆ. ‘ಸೆಲ್ಫೀ’, ‘ರಕ್ಷಾ ಬಂಧನ್​’, ‘ಸಾಮ್ರಾಜ್​ ಪೃಥ್ವಿರಾಜ್​’ ಸೇರಿದಂತೆ ಹಲವು ಸಿನಿಮಾಗಳು ನಿರೀಕ್ಷಿತ ಮಟ್ಟದ ಕಲೆಕ್ಷನ್​ ಮಾಡಲಾಗದೇ ನೆಲ ಕಚ್ಚಿದವು. ಈಗ ಅವರ ಜೊತೆ ಕೆಲಸ ಮಾಡಲು ಕೆಲವು ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರೆ. ಅಂಥ ನಿರ್ಮಾಪಕರ ಸಾಲಿನಲ್ಲಿ ವಿಪುಲ್​ ಅಮೃತ್​ಲಾಲ್​ ಶಾ ಕೂಡ ಇದ್ದಾರೆ.
‘ದಿ ಕೇರಳ ಸ್ಟೋರಿ’ ನಿರ್ಮಾಣ ಮಾಡಿ ದೊಡ್ಡ ಗೆಲುವು ಕಂಡಿರುವ ವಿಪುಲ್​ ಶಾ ಅವರು ಅಕ್ಷಯ್​ ಕುಮಾರ್​ ಜೊತೆ ಸಿನಿಮಾ ಮಾಡುವುದನ್ನು ಬಹಳ ಹಿಂದೆಯೇ ನಿಲ್ಲಿಸಿದ್ದಾರೆ. ನಿರ್ದೇಶಕನಾಗಿಯೂ ವಿಪುಲ್​ ಶಾ ಗುರುತಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಅಕ್ಷಯ್​ ಕುಮಾರ್​ ಮತ್ತು ವಿಪುಲ್​ ಶಾ ಅವರ ಒಟ್ಟಾಗಿ ಹಲವು ಸಿನಿಮಾಗಳನ್ನು ಮಾಡಿದ್ದರು. ಆದರೆ ನಂತರದ ದಿನಗಳಲ್ಲಿ ಅಕ್ಷಯ್​ ಕುಮಾರ್​ ಅವರಿಂದ ವಿಪುಲ್​ ಶಾ ಅಂತರ ಕಾಯ್ದುಕೊಂಡರು. ಇಂಥ ಸಂದರ್ಭಗಳಲ್ಲಿ ಗಾಸಿಪ್​ ಹಬ್ಬುವುದು ಸಹಜ. ಇವರಿಬ್ಬರ ನಡುವೆ ಏನೋ ವೈಮನಸ್ಸು ಉಂಟಾಗಿದೆ ಎಂದು ಎಲ್ಲರೂ ಮಾತನಾಡಿಕೊಂಡರು. ತಾವಿಬ್ಬರೂ ದೂರ ಆಗಿದ್ದಕ್ಕೆ ಕಾರಣ ಏನು ಎಂಬುದನ್ನು ವಿಪುಲ್​ ಶಾ ಅವರು ಈಗ ವಿವರಿಸಿದ್ದಾರೆ. ಆ ಮೂಲಕ ಅವರು ಸತ್ಯ ಏನೆಂಬುದನ್ನು ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!