ಉದಯವಾಹಿನಿ, ಬೆಂಗಳೂರು: ಜನರಿಗೆ ಸದ್ಯದಲ್ಲೇ ಒಂದು ಸಿಹಿಸುದ್ದಿ ಸಿಗಲಿದೆ. ಬೆಂಗಳೂರು ಟ್ರಾಫಿಕ್ಗೆ ಮುಕ್ತಿ ಸಿಗುವ ಕಾಲ ಸನಿಹ ಬಂದಿದೆ. ಹೌದು ಸಹ-ಸಂಸ್ಥಾಪಕ ಪ್ರಶಾಂತ್ ಪಿಟ್ಟಿ ಅವರು ಒಂದು ಘೋಷಣೆಯನ್ನು ಮಾಡಿದ್ದಾರೆ. ಈ ಹಿಂದೆ ಅವರು ಬೆಂಗಳೂರಿನ ದೀರ್ಘಕಾಲದ ಸಂಚಾರ ದಟ್ಟಣೆಯನ್ನು ಸರಿಪಡಿಸಲು 1 ಕೋಟಿ ರೂ ನೀಡುವುದಾಗಿ ವಾಗ್ದಾನ ನೀಡಿದರು. ಇದೀಗ ಅದಕ್ಕೆ ಪೂರಕವಾಗಿ ಹೊಸ ಅಪ್ಡೇಟ್ ನೀಡಿದ್ದಾರೆ. ಈ ಯೋಜನೆಯು ಒಂದು ವರ್ಷದೊಳಗೆ ನಗರದಲ್ಲಿ ಸಂಚಾರ ದಟ್ಟಣೆಯನ್ನು 25-30% ರಷ್ಟು ಕಡಿಮೆ ಮಾಡುತ್ತದೆ ಹೇಳಿದ್ದಾರೆ. ನಗರವನ್ನು ಕಾಡುತ್ತಿರುವ ಈ ಟ್ರಾಫಿಕ್ನ್ನು ಪರಿಹಾರ ಮಾಡಲು ಬೆಂಗಳೂರು ಸಂಚಾರ ಪೊಲೀಸ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮತ್ತು ನಗರ ಪೊಲೀಸರ ಆಯುಕ್ತರನ್ನು ಭೇಟಿಯಾಗಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರು ಸಂಚಾರ ಯೋಜನೆಯ ಕುರಿತು ಪ್ರಮುಖ ನವೀಕರಣ! ಒಂದು ವರ್ಷದೊಳಗೆ ಬೆಂಗಳೂರು ಸಂಚಾರವನ್ನು 25-30% ರಷ್ಟು ಸುಧಾರಿಸುವ ವಿಶ್ವಾಸ ನನಗಿದೆ ಎಂದು ಈ ಪೋಸ್ಟ್ನ್ಲಲಿ ಬರೆದುಕೊಂಡಿದ್ದಾರೆ. ಈ ಕೆಲಸಕ್ಕೆ ಅಧಿಕಾರಿಗಳು, ಗೂಗಲ್ ತಂಡ, ಐಐಎಸ್ಸಿ ಪ್ರಾಧ್ಯಾಪಕರು, ವಿಜ್ಞಾನಿಗಳು, ರಸ್ತೆ ಎಂಜಿನಿಯರ್ಗಳು ಮತ್ತು ಸಂಚಾರ-ತಂತ್ರಜ್ಞಾನ ಉದ್ಯಮಿಗಳು ಸೇರಿದಂತೆ ಪ್ರಮುಖ ಸಾರ್ವಜನಿಕ ಮತ್ತು ಖಾಸಗಿ ಪಾಲುದಾರರ ಸಹಾಯ ಕೇಳಿದ್ದಾರೆ.
