ಉದಯವಾಹಿನಿ, ಮೈಸೂರು: ಟೀಂ ಇಂಡಿಯಾದ ಮಾಜಿ ಬೌಲರ್‌ ರುದ್ರ ಪ್ರತಾಪ್‌ ಸಿಂಗ್‌ ಮೈಸೂರಿನಲ್ಲಿರುವ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ.ದೇವಸ್ಥಾನಕ್ಕೆ ಭೇಟಿ ನೀಡಿದ ಫೋಟೋಗಳನ್ನು ಆರ್‌ಪಿ ಸಿಂಗ್‌ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.
2009ರ ಟಿ20 ವಿಶ್ವಕಪ್‌ ಚಾಂಪಿಯನ್‌ ತಂಡದ ಸದಸ್ಯರಾಗಿದ್ದ ಇವರು 58 ಏಕದಿನ ಪಂದ್ಯವಾಡಿ 69 ವಿಕೆಟ್‌ ಪಡೆದಿದ್ದಾರೆ. ಇಂಗ್ಲೆಂಡ್‌ ವಿರುದ್ಧ 2011 ರಲ್ಲಿ ಕೊನೆಯ ಪಂದ್ಯವಾಡಿದ್ದ ಇವರು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌, ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌, ರಾಯಲ್‌ ಚಾಲೆಂಜರ್ಸ್‌ ತಂಡವನ್ನು ಪ್ರತಿನಿಧಿಸಿದ್ದರು.
ಉತ್ತರ ಪ್ರದೇಶದ ಮೂಲದ ಆರ್‌ಪಿ ಸಿಂಗ್‌ ಇಂಡಿಯಾ ಚಾಂಪಿಯನ್ಸ್‌ ತಂಡದ ಭಾಗವಾಗಿದ್ದು 2024 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ್ದರು.

Leave a Reply

Your email address will not be published. Required fields are marked *

error: Content is protected !!