ಉದಯವಾಹಿನಿ, ನವದೆಹಲಿ:  ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ನಂತರ, ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು, ಈಶಾನ್ಯ ರಾಜ್ಯದಲ್ಲಿ ಹಿಂಸಾಚಾರದ ಸ್ವರೂಪ ಬದಲಾಗುತ್ತಿರುವ ಬಗ್ಗೆ ಅಮಿತ್ ಶಾ ಅವರು ಕಳವಳ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಪರಿಸ್ಥಿತಿ ಕೂಡಾ ತುಂಬಾ ಅಸ್ತವ್ಯಸ್ತವಾಗಿದೆ ಎಂದು ಹೇಳಿದರು. ಹೊರಗಿನವರಿಂದ ಗುಂಡಿನ ಚಕಮಕಿಯಿಂದ ಕಣಿವೆ ಜಿಲ್ಲೆಗಳಲ್ಲಿನ ನಾಗರಿಕರು ಅಶಾಂತಿಯಿಂದಿದ್ದಾರೆ. ಬದಲಾಗುತ್ತಿರುವ ಹಿಂಸಾಚಾರದ ಸ್ವರೂಪದ ಬಗ್ಗೆ ಅಮಿತ್ ಶಾ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಹಿಂಸಾಚಾರದ ಆರಂಭಿಕ ಹಂತವು ಹೆಚ್ಚು ರಾಜಕೀಯ ಮತ್ತು ಸೂಕ್ಷ್ಮವಾಗಿತ್ತು. ಆದರೆ ಈಗ ಏನಾಗುತ್ತಿದೆ ಎಂದು ನಾವು ಹೇಳಲು ಸಾಧ್ಯವಿಲ್ಲ. ಪರಿಸ್ಥಿತಿ ತುಂಬಾ ಹದಗೆಟ್ಟಿದೆ ಎಂದರು. ಅಮಿತ್ ಶಾ ಅವರು ಸರ್ವಪಕ್ಷ ಸಭೆ ಕರೆದ ಒಂದು ದಿನದ ನಂತರ ಗೃಹ ಸಚಿವರು ಮತ್ತು ಮಣಿಪುರ ಮುಖ್ಯಮಂತ್ರಿ ನಡುವೆ ಸಭೆ ನಡೆದಿದೆ. ಮಣಿಪುರದಲ್ಲಿ ಪರಿಸ್ಥಿತಿಯನ್ನು ಶಮನಗೊಳಿಸಲು ಮತ್ತು ಶಾಂತಿಯನ್ನು ಪುನಃಸ್ಥಾಪಿಸಲು ಎಲ್ಲಾ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಿ ಅವರು ಸಭೆಯನ್ನು ಕರೆದಿದ್ದರು.

Leave a Reply

Your email address will not be published. Required fields are marked *

error: Content is protected !!