ಉದಯವಾಹಿನಿ, ಓಂ ಪ್ರಕಾಶ್ ರಾವ್ ನಿರ್ದೇಶನದ ಫೀನಿಕ್ಸ್ ಸಿನಿಮಾದ ಕೊನೆಯ ದಿನದ ಶೂಟಿಂಗ್ ಅನ್ನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡಲಾಯ್ತು. ನಿರ್ದೇಶಕ ಓಂ ಪ್ರಕಾಶ್ ರಾವ್, ನಟಿ ನಿಮಿಕಾ ರತ್ನಾಕರ್, ಖಡಕ್ ವಿಲನ್ ಪಾತ್ರದಲ್ಲಿ ನಟಿಸಿದ ಪ್ರಸನ್ನ ಸೇರಿದಂತೆ ಇಡೀ ಚಿತ್ರತಂಡ ಶೂಟಿಂಗ್‌ನಲ್ಲಿ ಭಾಗಿಯಾಗಿತ್ತು. ಕೊನೆ ದಿನದ ಶೂಟಿಂಗ್ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದೆ ಚಿತ್ರತಂಡ. ಈ ವೇಳೆ ಮಾತನಾಡಿದ ನಿರ್ದೇಶಕ ಓಂ ಪ್ರಕಾಶ್ ರಾವ್ ಸಾಕಷ್ಟು ಮಾಹಿತಿಯನ್ನ ಹಂಚಿಕೊಂಡಿದ್ದಾರೆ.
ಫೀನಿಕ್ಸ್ ಚಿತ್ರದ ಶೂಟಿಂಗ್ ವೇಳೆ ದರ್ಶನ್ ಬಗ್ಗೆ ಮಾತಾಡಿದ ಓಂ ಪ್ರಕಾಶ್ ರಾವ್. `ದರ್ಶನ್‌ಗಾಗಿ ಈ ಸಿನಿಮಾ ರೆಡಿ ಮಾಡಿದ್ದೆ, ಕಾರಣಾಂತರಗಳಿಂದ ಆಗಲಿಲ್ಲ. ದರ್ಶನ್ ಯಾವತ್ತೂ ನನ್ನ ಹತ್ರ ಕಥೆ ಕೇಳಿಲ್ಲ, ಕೇಳೋದು ಇಲ್ಲ. ಅಯ್ಯ ಸಿನಿಮಾ ಹಿಟ್ ಆಯಿತು ಅವತ್ತಿನಿಂದ ನನ್ನ ಮೇಲೆ ನಂಬಿಕೆ ದರ್ಶನ್ ಅವರಿಗೆ. ಏನ್ ಕಾಸ್ಟ್ಯೂಮ್, ಯಾವಾಗ ಶೂಟಿಂಗ್ ಅಷ್ಟೇ ಕೇಳುತ್ತಿದ್ದರು ದರ್ಶನ್. ದರ್ಶನ್‌ದು ತುಂಬಾ ಸೈಲೆಂಟ್ ಕ್ಯಾರೆಕ್ಟರ್, ಹಾರ್ಟ್ ಇಂದ ಒಳ್ಳೆ ವ್ಯಕ್ತಿ. ವಿಧಿ ಆಟವೋ ಗೊತ್ತಿಲ್ಲ ದರ್ಶನ್ ಜೈಲಲ್ಲಿರೋದು ಬೇಜಾರಾಗುತ್ತೆ’ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!