ಉದಯವಾಹಿನಿ, ಲಖನೌ: ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂ ಖಾನ್ 23 ತಿಂಗಳ ಜೈಲುವಾಸದ ನಂತರ ಸೀತಾಪುರ ಜೈಲಿನಿಂದ ಮಂಗಳವಾರ ಬಿಡುಗಡೆಯಾದರು. ಬೆಳಗ್ಗೆ ಬಿಡುಗಡೆಯಾಗಬೇಕಿತ್ತು, ಆದರೆ ನ್ಯಾಯಾಲಯ ಕಲಾಪದ ಕಾರಣದಿಂದ ತಡವಾಯಿತು. ಜೈಲಿನ ಹೊರಗೆ ನೂರಾರು ಅಭಿಮಾನಿಗಳು ಸ್ವಾಗತಕ್ಕಾಗಿ ಜಮಾಯಿಸಿದ್ದರು. ಆದರೆ ಜಿಲ್ಲಾಡಳಿತವು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163ರಡಿ ನಿಷೇಧಾಜ್ಞೆ ಜಾರಿಗೊಳಿಸಿತ್ತು.ಕಳೆದ ವಾರ ವಿಶೇಷ ಎಂಪಿ-ಎಂಎಲ್‌ಎ ಕೋರ್ಟ್ 2008ರ ಕೇಸ್‌ನಲ್ಲಿ ಅಜಂ ಖಾನ್‌ ಅವರನ್ನು ನಿರ್ದೋಷಿಯೆಂದು ಘೋಷಿಸಿತು. ಈ ಕೇಸ್ ರಾಂಪುರದ ಚಜ್ಲೆಟ್ ಪೊಲೀಸ್ ಠಾಣೆಯ ಬಳಿ ನಡೆದ ಘಟನೆಗೆ ಸಂಬಂಧಿಸಿದೆ. ಖಾನ್‌ ಅವರ ಕಾರಿನಿಂದ ಪೊಲೀಸರು ಹೂಟರ್ ತೆಗೆದಾಗ, ಅವರು ಮತ್ತು ಅವರ ಬೆಂಬಲಿಗರು ರಸ್ತೆ ತಡೆದು ಟ್ರಾಫಿಕ್ ಜಾಮ್ ಉಂಟುಮಾಡಿದ್ದರು. ಈ ಪ್ರತಿಭಟನೆಯಲ್ಲಿ ಕೆಲ ವಿದ್ಯುತ್ ಕಂಬಗಳಿಗೆ ಹಾನಿಯಾಗಿತ್ತು. ಈ ಕಾರಣದಿಂದ ಅಜಂ ಖಾನ್ ವಿರುದ್ಧ ಕೇಸ್ ದಾಖಲಾಗಿತ್ತು. ಸಾಕ್ಷ್ಯಗಳ ಕೊರತೆಯಿಂದ ಕೋರ್ಟ್ ಅವರನ್ನು ಬಿಡುಗಡೆಗೊಳಿಸಿತು.

Leave a Reply

Your email address will not be published. Required fields are marked *

error: Content is protected !!