ಉದಯವಾಹಿನಿ, ಬೆಂಗಳೂರು: ರೇಸ್‌ನಲ್ಲಿ 7ನೇ ಸ್ಥಾನ ಪಡೆದಿದ್ದಕ್ಕೆ ಕುದುರೆ ಓಡಿಸಿದ್ದ ಜಾಕಿ ಮೇಲೆ ಸ್ವೀವರ್ಡ್‌ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನ.1 ರಂದು ಬೆಂಗಳೂರಿನ ಟರ್ಫ್‌ ಕ್ಲಬ್‌ನಲ್ಲಿ ನಡೆದ ರೇಸ್‌ನಲ್ಲಿ ಜೋಲಿಸ್ ಸ್ಟಾರ್ ಹೆಸರಿನ ಕುದುರೆಯನ್ನು ಜಾಕಿ ರುಶಾಲ್ ಓಡಿಸಿದ್ದರು. ರುಶಾಲ್ ಅಪ್ರೆಂಟಿಸ್ ಜಾಕಿಯಾಗಿದ್ದರಿಂದ ಅಷ್ಟೊಂದು ಅನುಭವ ಇರಲಿಲ್ಲ. ಲೈಸೆನ್ಸ್ ಪಡೆದು ಒಂದು ತಿಂಗಳಾಗಿತ್ತು . ಹೀಗಾಗಿ ಜೋಲಿಸ್ ಸ್ಟಾರ್ ಕುದರೆಯನ್ನ ಓಡಿಸಿದ್ದ ಜಾಕಿ ರುಶಾಲ್ 7 ನೇ ಸ್ಥಾನ ಪಡೆದಿದ್ದರು.
ರೇಸ್‌ನಲ್ಲಿ 7ನೇ ಸ್ಥಾನ ಪಡೆದಿದ್ದಕ್ಕೆ ವಿಚಾರಣೆಗೆ ಬರಬೇಕೆಂದು ರುಶಾಲ್ ಅವರನ್ನು ಸ್ಟೀವರ್ಡ್ ರವಿಶಂಕರ್ ತನ್ನ ಚೇಂಬರ್‌ಗೆ ಕರೆಸಿಕೊಂಡಿದ್ದಾರೆ. ಸೀನಿಯರ್ ಸ್ಟೀವರ್ಡ್ ಅರಸ್ ಸಮ್ಮುಖದಲ್ಲೇ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ.
ಮೊದಲಿಗೆ ಆ ಆಘಾತದಿಂದ ಹೊರಬರದ ಜಾಕಿ ರುಶಾಲ್ ಖಿನ್ನತೆಯಿಂದ ಆತ್ಮಹತ್ಯೆ ಬಗ್ಗೆ ಸಹ ಚಿಂತನೆ ನಡೆಸಿದ್ದರು. ಕೊನೆಗೆ ಸ್ನೇಹಿತರ ಮೂಲಕ ನ.11 ರಂದು ಜಾಕಿ ಅಸೋಸಿಯೇಷನ್‌ಗೆ ದೂರು ನೀಡಿದ್ದಾರೆ. ಜಾಕಿಯ ಮೇಲಿನ ಹಲ್ಲೆ ಬಗ್ಗೆ ಬಾಂಬೆ ಜಾಕಿ ಅಸೋಸಿಯೇಷನ್ ಇಂದ ಖಂಡನೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!