ಉದಯವಾಹಿನಿ, ನವದೆಹಲಿ: 2005ರಿಂದ 15 ವರ್ಷದ ಅವಧಿಯಲ್ಲಿ ಭಾರತದಲ್ಲಿ ಸಾಕಷ್ಟು ಜನರು ಬಡತನದ ಬಂಧ (Poverty) ಕಳಚಿಕೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಹೇಳುತ್ತಿದೆ. ಜುಲೈ 11 ಎಂದು ಪ್ರಕಟವಾದ ಈ ವರದಿ ಪ್ರಕಾರ , 2005 ರ ಏಪ್ರಿಲ್ನಿಂದ 2020 ರ ಮಾರ್ಚ್ವರೆಗಿನ ಅವಧಿಯಲ್ಲಿ 41.5 ಕೋಟಿ ಭಾರತೀಯರು ಬಡತನ ರೇಖೆಯಿಂದ ಮೇಲೇರಿರುವುದು ತಿಳಿದುಬಂದಿದೆ. 2005/06 ರಲ್ಲಿ ಭಾರತದಲ್ಲಿ ಬಡತನ ಶೇ . 55.1 ರಷ್ಟಿತ್ತು . 2019/2021 ರ ಅವಧಿಯಲ್ಲಿ ಇದರ ಪ್ರಮಾಣ ಶೇ . 16.4 ಕ್ಕೆ ಇಳಿಮುಖವಾಗಿದೆ. 2005/06ರಲ್ಲಿ ಭಾರತದಲ್ಲಿ 64.5 ಕೋಟಿ ಜನರು ಬಹು ಆಯಾಮಗಳ ಬಡತನಕ್ಕೆ ಸಿಲುಕಿದ್ದರು. 2015/16ರಲ್ಲಿ ಇದು 37 ಕೋಟಿಗೆ ಇಳಿಯಿತು. 2019/21ರಲ್ಲಿ ಈ ಸಂಖ್ಯೆ 23 ಕೋಟಿಗೆ ಬಂದಿದೆ. ವಿಶ್ವಸಂಸ್ಥೆ ಅಭಿವೃದ್ಧಿ ಯೋಜನೆ, ಆಕ್ಸ್ಫರ್ಡ್ ಬಡತನ ಮತ್ತು ಮಾನವ ಅಭಿವೃದ್ಧಿ ಯೋಜನೆ ಸಂಸ್ಥೆಗಳು ಸೇರಿ ಬಿಡುಗಡೆ ಮಾಡಿದ ಮಲ್ಟಿ ಡೈಮನ್ಷನಲ್ ಪಾವರ್ಟಿ ಇಂಡೆಕ್ಸ್ ವರದಿಯಲ್ಲಿ ಈ ಅಂಶಗಳನ್ನು ಪ್ರಸ್ತಾಪಿಸಲಾಗಿದೆ. 21ನೇ ಶತಮಾನದಲ್ಲಿ ಬಡತನದ ನಿರ್ಮೂಲನೆ ಹೇಗಿದೆ ಎಂಬುದನ್ನು ಈ ವರದಿಯಲ್ಲಿ ಅವಲೋಕಿಸಲಾಗಿದೆ. ಅಂದರೆ 2000ರಿಂದ 2022ರವರೆಗೆ ಜಾಗತಿವಾಗಿ 81 ದೇಶಗಳಲ್ಲಿನ ಬಡತನದ ಬಗ್ಗೆ ಅಧ್ಯಯನ ಮಾಡಲಾಗಿದೆ.
ಭಾರತವೂ ಸೇರಿದಂತೆ 25 ದೇಶಗಳು ಬಡತನ ನಿಯಂತ್ರಿಸಲು ಯಶಸ್ವಿಯಾಗಿವೆ. ಎಸ್ಯುವಿ ಕಾರುಗಳಿಗೆ 28ಪರ್ಸೆಂಟ್ ಜಿಎಸ್ಟಿ ಜೊತೆಗೆ ಶೇ. 22 ಕಾಂಪೆನ್ಸೇಶನ್ ಸೆಸ್; ಯಾವ್ಯಾವುವು ಎಸ್ಯುವಿ ಕಾರುಗಳು? ಭಾರತ, ಚೀನಾ, ಕಾಂಗೋ, ಹೊಂಡುರಸ್, ಇಂಡೋನೇಷ್ಯಾ, ಮೊರಾಕೋ, ಸರ್ಬಿಯಾ, ವಿಯೆಟ್ನಾಂ ಮೊದಲಾದ 25 ದೇಶಗಳು 15 ವರ್ಷದಲ್ಲಿ ಎಂಪಿಐ ಅನ್ನು ಅರ್ಧದಷ್ಟು ಇಳಿಸಲು ಯಶಸ್ವಿಯಾಗಿವೆ. ವಿಶ್ವಸಂಸ್ಥೆ ಸಿದ್ಧಪಡಿಸಿದ ಈ ಅಧ್ಯಯನ ವರದಿಯಲ್ಲಿ ಜಗತ್ತಿನ 110 ದೇಶಗಳಲ್ಲಿನ 610 ಕೋಟಿ ಜನರ ಪೈಕಿ 101 ಕೋಟಿ ಜನರು ಈಗಲೂ ಬಹುಸ್ತರದ ಕಡುಬಡತನದಲ್ಲಿ ವಾಸಿಸುತ್ತಿದ್ದಾರೆ. ಅಂದರೆ ಶೇ. 18ರಷ್ಟು ಜನರು ಕಡುಬಡವರಾಗಿದ್ದಾರೆ. ಪ್ರತೀ 6 ಮಂದಿ ಬಡವರಲ್ಲಿ ಐವರು ಆಫ್ರಿಕಾದ ಸಹಾರ ಮತ್ತು ದಕ್ಷಿಣ ಏಷ್ಯಾದ ದೇಶವಾಸಿಗಳಾಗಿರುವುದು ಗಮನಾರ್ಹ. ಚಿಪ್ ಇರುವ ಇ-ಪಾಸ್ಪೋರ್ಟ್; ಬೆಂಗಳೂರಿನಲ್ಲಿ ಮೊದಲ ಪ್ರಯೋಗ; ಎರಡೇ ದಿನದಲ್ಲಿ ಸಿಗುತ್ತಾ ಪಾಸ್ಪೋರ್ಟ್? 2020ರಲ್ಲಿ ಉದ್ಭವಿಸಿದ ಕೋವಿಡ್ ಸಾಂಕ್ರಾಮಿಕ ರೋಗ ಇಡೀ ಜಗತ್ತನ್ನು ಅಲುಗಾಡಿಸಿದ ಸಂಗತಿ ಎಲ್ಲರಿಗೂ ಗೊತ್ತಿರಬಹುದು. ಬಹುತೇಕ ಎಲ್ಲಾ ದೇಶಗಳ ಆರ್ಥಿಕತೆ ಅಧಃಪತನಗೊಂಡಿತ್ತು. ಅಲ್ಲಿಯವರೆಗೂ ಬಡತನದ ನಿರ್ಮೂಲನೆಯ ವೇಗ ಬಹಳ ಹೆಚ್ಚಿತ್ತು ಎಂಬ ಸಂಗತಿಯನ್ನು ವಿಶ್ವಸಂಸ್ಥೆ ಮತ್ತು ಆಕ್ಸ್ಫರ್ಡ್ ನಡೆಸಿದ ಜಂಟಿ ಅಧ್ಯಯನ ಕಂಡುಕೊಂಡಿದೆ. ಕೋವಿಡ್ ನಂತರ ಪರಿಸ್ಥಿತಿ ಹೇಗೆ ಸಾಗಿದೆ ಎಂಬುದನ್ನು ಈ ಅಧ್ಯಯನದಲ್ಲಿ ಅವಲೋಕಿಸಲಾಗಿಲ್ಲ.
