ಉದಯವಾಹಿನಿ, ಈಗʼ, ಬಾಹುಬಲಿ ಬಳಿಕ ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ‘ವಾರಣಾಸಿ’ಯಲ್ಲಿ ಕಿಚ್ಚ ಸುದೀಪ್‌ ನಟಿಸುತ್ತಿದ್ದಾರೆ ಎಂಬ ಮಾತು ಹೇಳಿಬಂದಿದೆ. ಸುದೀಪ್‌ ಈ ಸಿನಿಮಾದಲ್ಲಿ ಹನುಮಂತನಾಗಿ ಸಾಹಸ ಪ್ರದರ್ಶಿಸಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ರಾಜಮೌಳಿ ಸಿನಿಮಾ ವಾರಣಾಸಿ ಚಿತ್ರದ ಪ್ರಮುಖ ಪಾತ್ರಗಳನ್ನ ರಿವೀಲ್ ಮಾಡಲಾಗಿದೆ. ಪ್ರಿನ್ಸ್ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರ್ ಸಿನಿಮಾದ ಪ್ರಮುಖ ಪಾತ್ರದಲ್ಲಿದ್ದಾರೆ. ಇನ್ನುಳಿದಂತೆ ಎಲ್ಲಾ ಮುಖ್ಯ ಪಾತ್ರಗಳಿಗೂ ಹುಡುಕಾಟ ಶುರುವಾಗಿದ್ದು ವೀರ ಆಂಜನೇಯನ ಪಾತ್ರಕ್ಕಾಗಿ ಸುದೀಪ್ ನಟಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ರಾಜಮೌಳಿ ಸಿನಿಮಾದಲ್ಲಿ ಪ್ರತಿ ಪಾತ್ರಕ್ಕೂ ಪ್ರಾಶಸ್ತ್ಯವಿರುತ್ತೆ. ಯಾಕಂದ್ರೆ ಹೀರೋ ಹೊರತಾಗಿ ಪ್ರತಿ ಪಾತ್ರವನ್ನೂ ಕಥೆಯಲ್ಲಿ ಮೆರೆಸುವ ನಿರ್ದೇಶಕ ರಾಜಮೌಳಿ. ಹೀಗಾಗಿ ವಾರಣಾಸಿಯ ಪ್ರಮುಖ ಪಾತ್ರವಾಗಿರುವ ಹನುಮಂತನ ಪಾತ್ರಕ್ಕಾಗಿ ಕಿಚ್ಚ ಸುದೀಪ್‌ಗೆ ರಾಜಮೌಳಿ ಆಫರ್ ಮಾಡಿದ್ದು, ಕಿಚ್ಚ ಶೆಡ್ಯೂಲ್ ನೋಡಿಕೊಂಡು ಹಾಗೂ ಪಾತ್ರದ ಪ್ರಾಮುಖ್ಯತೆಯನ್ನ ಪರಿಗಣಿಸಿ ಒಪ್ಪಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಲ್ಲಿಗೆ ವಿಶ್ವವೇ ತಿರುಗಿ ನೋಡಲು ಸಜ್ಜಾಗಿರುವ ಬಿಗ್ ಚಿತ್ರದಲ್ಲಿ ಸುದೀಪ್ ಇರ್ತಾರೆ ಅನ್ನೋದು ಕನ್ನಡ ಸಿನಿ ರಸಿಕರ ಹೆಮ್ಮೆ. ಕಿಚ್ಚ ಗ್ರೀನ್ ಸಿಗ್ನಲ್ ಕೊಡೋದಷ್ಟೇ ಬಾಕಿ ಇರೋದು.

Leave a Reply

Your email address will not be published. Required fields are marked *

error: Content is protected !!