ಉದಯವಾಹಿನಿ, ನಂದಮೂರಿ ಬಾಲಕೃಷ್ಣ ಅವರ ‘ಅಖಂಡ’ ಚಿತ್ರವು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಈ ಚಿತ್ರ ಒಳ್ಳೆಯ ಬಿಸ್ನೆಸ್ ಮಾಡಿತ್ತು. ಈ ಸಿನಿಮಾ ಬಿಡುಗಡೆ ಕಂದಿದ್ದು ಕೊವಿಡ್ ಸಂದರ್ಭದಲ್ಲಿ (2021) ಆದರೂ ಚಿತ್ರವು ಒಳ್ಳೆಯ ಗಳಿಕೆ ಮಾಡಿದ್ದನ್ನು ಕಾಣಬಹುದು. ಈ ಚಿತ್ರಕ್ಕೆ ಸೀಕ್ವೆಲ್ ಸಿದ್ಧವಾಗಿದೆ. ಅದುವೇ ‘ಅಖಂಡ 2’. ಈ ಸಿನಿಮಾವನ್ನು ಬೋಯಪತಿ ಶ್ರೀನು ನಿರ್ದೇಶಿಸಿದ್ದಾರೆ. ಈ ಹಿಂದೆ ಈ ಇಬ್ಬರ ಕಾಂಬಿನೇಷನ್‌ನಲ್ಲೇ ‘ಅಖಂಡ’ ಬಂದಿತ್ತು. ಈ ಸಿನಿಮಾದ ಟ್ರೇಲರ್ ಗಮನ ಸೆಳೆದಿದೆ.
‘ಅಖಂಡ 2’ ಸಿನಿಮಾದ ಬಗ್ಗೆ ಈಗಾಗಲೇ ಭಾರಿ ಹೈಪ್ ಇದೆ. ಕೆಲವು ತಿಂಗಳುಗಳಿಂದ ಚಿತ್ರೀಕರಣ ನಡೆಸುತ್ತಿರುವ ಈ ಸಿನಿಮಾದ ಅಪ್‌ಡೇಟ್‌ಗಳಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಈ ಸಿನಿಮಾದಿಂದ ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್‌ಗಳು, ಹಾಡುಗಳು ಮತ್ತು ಟೀಸರ್ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳನ್ನು ಸೃಷ್ಟಿಸಿವೆ. ಈಗ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಈ ಟ್ರೇಲರ್ ಸಿನಿಮಾದ ಮೇಲೆ ನಿರೀಕ್ಷೆಗಳನ್ನು ಸೃಷ್ಟಿಸಿದೆ.
ಸಾಮಾನ್ಯವಾಗಿ ತೆಲುಗು ಸಿನಿಮಾದ ಈವೆಂಟ್​ಗಳು ಹೈದರಾಬಾದ್​ನಲ್ಲಿ ನಡೆಯುತ್ತವೆ. ಆದರೆ, ಕರ್ನಾಟಕದ ಚಿಂತಾಮಣಿಯಲ್ಲಿ ಈ ಕಾರ್ಯಕ್ರಮವು ನಡೆಯಿತು. ಟ್ರೇಲರ್ ಈವೆಂಟ್​ಗೆ ಕನ್ನಡದ ವರನಟರಾಜ್​ಕುಮಾರ್ ಅವರ ಮಗ ಶಿವರಾಜ್​ಕುಮಾರ್ ಆಗಮಿಸಿದರು. ಟ್ರೇಲರ್ ನೋಡಿ ಎಲ್ಲರೂ ಖುಷಿಪಟ್ಟರು.

Leave a Reply

Your email address will not be published. Required fields are marked *

error: Content is protected !!