ಉದಯವಾಹಿನಿ, ನವದೆಹಲಿ: ಕೊಟ್ಟ ಮಾತು ಉಳಿಸಿಕೊಳ್ಳಬೇಕು ಅಂತಾ ನಾನು ಹೇಳಿದ್ದು ಬೇರೆ, ನನ್ನ ಹೇಳಿಕೆ ತಿರುಚಲಾಗಿದೆ ಎಂದು ಮಾಜಿ ಸಂಸದ, ಬಮೂಲ್‌ ಅಧ್ಯಕ್ಷ ಡಿಕೆ ಸುರೇಶ್ ಹೇಳಿದ್ದಾರೆ. ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸಿಎಂ ಕೊಟ್ಟ ಮಾತು ಉಳಿಸಿಕೊಳ್ಳಬೇಕು ಅಂತಾ ಹೇಳಿದ್ದು ಬೇರೆ, ನೀವು ತೋರಿಸಿದ್ದು ಬೇರೆ. ನಾನು ಆ ರೀತಿ ಹೇಳಿಲ್ಲ. ನನ್ನ ಹೇಳಿಕೆ ತಿರುಚಲಾಗಿದೆ. ನಾನು ಹೇಳಿದ್ದು ಬೇರೆ ತರ. ನೀವು ಹೇಳುತ್ತಿರುವುದು ಬೇರೆ ತರ ಎಂದಿದ್ದಾರೆ. ಸಿಎಂ, ಡಿಸಿಎಂ ಸಭೆ ನಡೆಸಿ ಹೇಳಿದ ಬಳಿಕ ನಾನು ಹೇಳುವುದು ಏನು ಇಲ್ಲ. ಒಟ್ಟಾಗಿ ಉಪಾಹಾರಕ್ಕೆ ಸೇರಿ, ಒಗ್ಗಟ್ಟಾಗಿದ್ದೇವೆ ಅಂತಾ ಹೇಳೋದು ಅವರ ಕರ್ತವ್ಯ. ರಾಜ್ಯದ ಜನರಿಗೆ ಮಾತು ಕೊಟ್ಟಿದ್ದಾರೆ, ಅದರಂತೆ ಸಿಎಂ, ಡಿಸಿಎಂ ನಡೆದುಕೊಳ್ತಾರೆ. ಈ ಬಾರಿ ಇಬ್ಬರು ನಾಯಕರು ಮಾತಾಡಿದ್ದಾರೆ. ಈ ಬಗ್ಗೆ ನಾನು ಮಾತಾಡೋದು ಸರಿ ಅಲ್ಲ ಎಂದು ತಿಳಿಸಿದ್ದಾರೆ. ದೆಹಲಿಗೆ ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದೇನೆ, ಹೈಕಮಾಂಡ್ ನಾಯಕರು ಸಿಕ್ಕರೆ ಭೇಟಿಯಾಗುವೆ. ಶನಿವಾರ, ಭಾನುವಾರ ಆಗಿರುವ ಕಾರಣ ಭೇಟಿ ಅನುಮಾನ. ವರಿಷ್ಠರು ಸಮಯ ಕೊಟ್ಟರೆ ಭೇಟಿಯಾಗುತ್ತೇನೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!