ಉದಯವಾಹಿನಿ, ಸ್ಯಾಂಡಲ್ವುಡ್ನಲ್ಲಿ ʻಹಾಲುಂಡ ತವರುʼ ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ ನಟಿ ಎಂದರೆ ಅದು ಸಿತಾರಾ. 90ರ ದಶಕದ ಫೇಮಸ್ ನಟಿ ಸಿತಾರಾ ಅವರು ಇದೀಗ ಸ್ಯಾಂಡಲ್ವುಡ್ಗೆ ಬಹಳ ದಿನಗಳ ನಂತರ ಮರಳಿದ್ದಾರೆ. ʻಹೊಂದಿಸಿ ಬರೆಯಿರಿʼ ಸಿನಿಮಾ ಮೂಲಕ ಬದುಕನ್ನು ಬಂದಂತೆ ಸ್ವೀಕರಿಸಿ ಎಂಬ ಸಂದೇಶ ಕೊಟ್ಟಿದ್ದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್, ಈಗ ಅವರು ಬದುಕಿನಲ್ಲಾದ ಒಂದು ಚಿಕ್ಕ ತಪ್ಪು ಕುಟುಂಬವನ್ನು ಎಷ್ಟು ದೂರ ಮಾಡುತ್ತದೆ ಜೊತೆಗೆ ತಂದೆ ತಾಯಿ ಮೌಲ್ಯಗಳನ್ನು ಸಾರುವ ಕಂಟೆಂಟ್ ನೊಂದಿಗೆ ಬಂದಿದ್ದಾರೆ. ಈ ಕಥೆಗೆ ಚಿತ್ರಕ್ಕೆ ʻತೀರ್ಥರೂಪ ತಂದೆಯವರಿಗೆʼ ಎಂಬ ಟೈಟಲ್ ಇಟ್ಟಿದ್ದಾರೆ. ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಈ ಚಿತ್ರದಲ್ಲಿ ಸಿತಾರಾ ಮಹತ್ವದ ಪಾತ್ರ ಮಾಡಿದ್ದಾರೆ.
ನನಗೆ ಉತ್ತಮವಾದ ಪಾತ್ರ ಕೊಟ್ಟಿದ್ದಾರೆ. ನಿಮಗೆ ನನ್ನ ಪಾತ್ರ ಇಷ್ಟವಾಗುತ್ತದೆ. ಕಥೆ ಪ್ರೇಕ್ಷಕರ ಹೃದಯ ತಟ್ಟುತ್ತದೆ. ಕನ್ನಡದಲ್ಲಿ ತುಂಬಾ ದಿನಗಳ ಬಳಿಕ ಬಣ್ಣ ಹಚ್ಚಿದ್ದೇನೆ. ನಾನು ನನ್ನ ಕನಸು ಆದಮೇಲೆ ರಾಜೇಶ್ ನಟರಂಗ ಅವರ ಜೊತೆ ಅಭಿನಯಿಸಿದ್ದೇನೆ” ಎನ್ನುತ್ತಾರೆ ಸಿತಾರಾ.
ಇದು ಬೇರೆ ಕಥೆಗೆ ಇಟ್ಟ ಟೈಟಲ್. ನಾನು & ನಿಹಾರ್ ಭೇಟಿಯಾದಾಗ ಕಥೆ ಬಗ್ಗೆ ಚರ್ಚೆ ಮಾಡಿದೆವು. ಥಿಯೇಟರ್ ಗೆ ಪ್ರೇಕ್ಷಕರನ್ನು ಆಕರ್ಷಿಸಲು ಟೈಟಲ್ ಬಹಳ ಮುಖ್ಯ. ಅಲ್ಲದೇ ಜನಕ್ಕೆ ಹತ್ತಿರವಾಗಿ ಇರಬೇಕು ಹಾಗೂ ಕಥೆಗೆ ಅದು ಸೂಟ್ ಆಗುವ ರೀತಿಯೂ ಇರಬೇಕು. ಹೀಗಾಗಿ ಈ ಚಿತ್ರಕ್ಕೆ ಇದೇ ಟೈಟಲ್ ಇಟ್ಟೇವು. ತೀರ್ಥರೂಪ ತಂದೆಯವರಿಗೆ ತುಂಬಾ ಒಳ್ಳೆ ಟೈಟಲ್ ಎಂದು ಎಲ್ಲರೂ ಹೇಳಿದರು. ಚಿತ್ರದ ಪ್ರಮುಖ ಪಾತ್ರಧಾರಿ ಹುಡುಕಾಟದಲ್ಲಿ ಕೊನೆಗೆ ಏನೂ ಸಿಗಲಿದೆ ಎನ್ನುವುದು ಚಿತ್ರದ ಆಶಯ. ಈ ಚಿತ್ರದಲ್ಲಿ ಕಲಾವಿದರ ದಂಡೇ ಇದೆ. ಎಲ್ಲಾ ಪಾತ್ರಗಳು ಸಹಜವಾಗಿ, ಉತ್ತಮವಾಗಿ ಮೂಡಿಬಂದಿದೆ” ಎಂದರು ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್.
