ಉದಯವಾಹಿನಿ, ವಿಶಾಖಪಟ್ಟಣ : ವಿಶಾಖಪಟ್ಟಣದಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಅಧಿಕಾರಯುತ ಪ್ರದರ್ಶನ ನೀಡಿದ ಟೀಮ್‌ ಇಂಡಿಯಾ 9 ವಿಕೆಟ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿತು. ಆ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2-1 ರಿಂದ ಗೆದ್ದುಕೊಂಡಿತು. ಸರಣಿ ಗೆಲುವಿನ ಬಳಿಕ ಸಂಭ್ರಮಾಚರಣೆ ವೇಳೆ ರೋಹಿತ್‌ ಶರ್ಮ ಅವರ ಒಂದು ನಡೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಏಕದಿನ ಸರಣಿ ಗೆದ್ದ ನಂತರ, ಚೊಚ್ಚಲ ಏಕದಿನ ಶತಕ ಬಾರಿಸಿದ ಯಶಸ್ವಿ ಜೈಸ್ವಾಲ್, ಸಂಭ್ರಮಾಚರಣೆಯ ಕೇಕ್ ಕತ್ತರಿಸಿದರು. ವಿರಾಟ್ ಕೊಹ್ಲಿ ಜೊತೆಗೂಡಿದರು. ಆದರೆ ರೋಹಿತ್ ಶರ್ಮಾ ಕೇಕ್‌ ತಿನ್ನಲು ನಿರಾಕರಿಸಿದರು. ಕೇಕ್‌ ತಿನ್ನಿಸಲು ಬಂದ ಜೈಸ್ವಾಲ್‌ಗೆ ಬೇಡ ಮಾರಾಯ ನಾನು ಮತ್ತೆ ದಪ್ಪಗಾಗುತ್ತೇನೆ ಎಂದರು. ರೋಹಿತ್‌ ಅವರ ಈ ಮಾತು ಕೇಳಿ ಸಹ ಆಟಗಾರರು ಒಂದು ಕ್ಷಣ ನಗೆಗಡಲಲ್ಲಿ ತೇಲಿದರು. ಫಿಟ್‌ನೆಸ್‌ಗೆ ಆಧ್ಯತೆ ನೀಡದೇ ದಪ್ಪನಾಗಿದ್ದ ರೋಹಿತ್‌ ಅವರನ್ನು ನೆಟ್ಟಿಗರು ವಡಪಾವ್‌ ಎಂದು ಹಲವು ಬಾರಿ ತಮಾಷೆ ಮಾಡಿದ್ದರು. ಪಂದ್ಯದ ವೇಳೆಯೂ ಪೋಸ್ಟರ್‌ಗಳನ್ನು ಹಿಡದು ಅವರನ್ನು ಗೇಲಿ ಮಾಡಿದ್ದರು. ಇದರ ಬಳಿಕ ರೋಹಿತ್‌ ಕಳೆದ ಒಂದು ವರ್ಷದಿಂದ ಫಿಟ್‌ನೆಸ್‌ ಕಡೆ ಗಮನ ಹರಿಸಿದ್ದಾರೆ. ವಡ ಪಾವ್‌ ತಿನ್ನಲ್ಲ ಎಂದು ಕೂಡ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು.

Leave a Reply

Your email address will not be published. Required fields are marked *

error: Content is protected !!