ಉದಯವಾಹಿನಿ, ಲಾಹೋರ್: ಭಾರತವು ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಆರಂಭಿಸಿದ ವೇಳೆ “ಬಂಕರ್ನಲ್ಲಿ ಅಡಗಿಕೊಳ್ಳುವಂತೆ” ನನಗೆ ಸಲಹೆ ಬಂದಿತ್ತು ಎಂದು ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಬಹಿರಂಗಪಡಿಸಿದ್ದಾರೆ.ಡಿಸೆಂಬರ್ 27, 2007 ರಂದು ರಾವಲ್ಪಿಂಡಿಯಲ್ಲಿ ಬಂದೂಕು ಮತ್ತು ಬಾಂಬ್ ದಾಳಿಯಲ್ಲಿ ಹತ್ಯೆಗೀಡಾದ ತಮ್ಮ ಪತ್ನಿ ಮತ್ತು ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ 18ನೇ ಪುಣ್ಯತಿಥಿ ಅಂಗವಾಗಿ ಸಿಂಧ್ ಪ್ರಾಂತ್ಯದ ಲರ್ಕಾನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜರ್ದಾರಿ ಈ ವಿಷಯವನ್ನು ರಿವೀಲ್ ಮಾಡಿದ್ದಾರೆ.”ಮಿಲಿಟರಿ ಕಾರ್ಯದರ್ಶಿ ನನ್ನ ಬಳಿಗೆ ಬಂದು, ‘ಸರ್, ಯುದ್ಧ ಪ್ರಾರಂಭವಾಗಿದೆ’ ಎಂದರು. ಆದರೆ ನಾಲ್ಕು ದಿನಗಳ ಹಿಂದೆಯೇ ಯುದ್ಧ ನಡೆಯಲಿದೆ ಎಂದು ಆತನಿಗೆ ನಾನು ಹೇಳಿದ್ದೆ. ‘ಸರ್, ನಾವು ಬಂಕರ್ಗೆ ಹೋಗೋಣ’ ಎಂದ. ಆದರೆ ನಾನು, ‘ಹುತಾತ್ಮರಾದರೇ ಇಲ್ಲೇ ಆಗೋಣ, ನಾಯಕರು ಬಂಕರ್ಗಳಲ್ಲಿ ಸಾಯಬಾರದು. ಅವರು ಯುದ್ಧಭೂಮಿಯಲ್ಲಿ ಸಾಯಬೇಕು,” ಎಂದಿದ್ದೆ ಎಂದು ಜರ್ದಾರಿ ತಿಳಿಸಿದ್ದಾರೆ.”ಪಾಕಿಸ್ತಾನ ಶಾಂತಿ ಬಯಸುತ್ತದೆ. ಆದರೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಂಪೂರ್ಣವಾಗಿ ಸಿದ್ಧವಾಗಿದೆ” ಎಂದು ಜರ್ದಾರಿ ಹೇಳಿದರು.
