ಉದಯವಾಹಿನಿ, ಖೋರ್ಧಾ (ಒಡಿಶಾ): ಜೀವನದ ಸವಾಲುಗಳು ನಮ್ಮನ್ನು ಹಲವು ಪರೀಕ್ಷಿಸುತ್ತವೆ. ಕೆಲವರು ತಮ್ಮ ದೃಢಸಂಕಲ್ಪದಿಂದ ಆ ಸವಾಲುಗಳನ್ನು ಗೆದ್ದರೆ, ಇನ್ನು ಕೆಲವರು ಸೋಲುತ್ತಾರೆ. ವೈಜ್ಞಾನಿಕ ಕೃಷಿ ಮಾಡಿ ಗೆದ್ದ ಅಭಿಜಿತ್ ಕರ್ ಅವರು ಮೊದಲ ವರ್ಗಕ್ಕೆ ಸೇರಿದವರು. ಮಾಜಿ ಚಾರ್ಟರ್ಡ್​ ಅಕೌಂಟೆಂಟ್ ಆಗಿರುವ ಇವರು, ಇಂದು ವೈಜ್ಞಾನಿಕ ಕೃಷಿಕ.

ಕೋವಿಡ್ ಸಾಂಕ್ರಾಮಿಕದ ವೇಳೆ ಕೆಲಸ ಕಳೆದುಕೊಂಡ ಅಭಿಜಿತ್​, ಹೊಸ ಬದುಕು ಕಟ್ಟಿಕೊಳ್ಳಲು ಕೃಷಿಯನ್ನು ಅವಲಂಬಿಸಿದರು. ಮಣ್ಣಿನ ಬದಲಿಗೆ ಸ್ಪ್ರೆಡ್​ ಶೀಟ್​ನಲ್ಲಿ ಬೆಳೆ ಬೆಳೆಯುವ ಪದ್ಧತಿಯನ್ನು ಅಳವಡಿಸಿಕೊಂಡರು. ಐದು ವರ್ಷ ಗತಿಸುವಷ್ಟರಲ್ಲಿ ಒಡಿಶಾದ ಅತ್ಯಂತ ಯಶಸ್ವಿ ಹೈಡ್ರೋಪೋನಿಕ್ ರೈತರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. CAಯಿಂದ ಯಶಸ್ವಿ ಕೃಷಿಕ: ಒಡಿಶಾದ ಖೋರ್ಧಾ ಜಿಲ್ಲೆಯ ರೌತ್‌ಪಾಡಾ ನಿವಾಸಿಯಾದ ಅಭಿಜಿತ್​ ಅವರು, ಇಂದು ಹೈಟೆಕ್ ಪಾಲಿಹೌಸ್ ಒಳಗೆ ಕೊಕೊ ಪೀಟ್ ಮತ್ತು ತೆಂಗಿನಕಾಯಿ ಸಿಪ್ಪೆಗಳಲ್ಲಿ ಕೆಂಪು, ಹಳದಿ ಮತ್ತು ಹಸಿರು ಕ್ಯಾಪ್ಸಿಕಮ್​ಗಳನ್ನು (ದೊಣ್ಣೆ ಮೆಣಸಿನಕಾಯಿ) ಬೆಳೆಯುತ್ತಿದ್ದಾರೆ.

ಅಭಿಜಿತ್ ಅವರ ಕೃಷಿ ಪ್ರಯಾಣವು ಬಿಕ್ಕಟ್ಟಿನಿಂದ ಆರಂಭವಾಯಿತು. ಕೋವಿಡ್​​ನಿಂದಾಗಿ ಕೆಲಸ ಕಳೆದುಕೊಂಡು ಕುಟುಂಬವನ್ನು ಪೋಷಿಸುವ ಬಗ್ಗೆ ನನಗೆ ಆತಂಕವಿತ್ತು. ಕೃಷಿಯನ್ನು ಪ್ರಾರಂಭಿಸಲು ನಿರ್ಧರಿಸಿದಾಗ ನನ್ನ ಭವಿಷ್ಯದ ಕಾರ್ಯತಂತ್ರವನ್ನು ಪುನರ್​ ವಿಮರ್ಶಿಸಲು ಅಕ್ಷರಶಃ ಹೆಣಗಾಡುತ್ತಿದ್ದೆ. ಮಣ್ಣುರಹಿತ ಕೃಷಿಯ ಬಗ್ಗೆ ಕಲಿತ ನಂತರ, ಅದನ್ನು ಜಮೀನಿನಲ್ಲಿ ಪ್ರಯೋಗಿಸಲು ನಿರ್ಧರಿಸಿದೆ” ಎಂದು ಅಭಿಜಿತ್ ಹೇಳಿದರು.

Leave a Reply

Your email address will not be published. Required fields are marked *

error: Content is protected !!