ಉದಯವಾಹಿನಿ, ನಳಂದ, ಬಿಹಾರ: ಭಾರಿ ಹಣವನ್ನು ಹೊಂದಿರುವ ಶ್ರೀಮಂತರ ಬಗ್ಗೆ ಕೇಳಿರಬಹುದು. ಆದರೆ ಬಿಹಾರದಲ್ಲಿ ಹಣದ ಮರವೊಂದು ಇದೆ. ಇಂದು ಆ ಬಗ್ಗೆ ನಾವು ಇಂಟ್ರೆಸ್ಟಿಂಗ್ ಕಥೆಯೊಂದನ್ನು ಹೇಳಲು ಹೊರಟಿದ್ದೇವೆ. ಜನರು ತಮ್ಮ ಮನದಿಂಗಿತಗಳನ್ನು ಈಡೇರಿಸಿಕೊಳ್ಳಲು ಈ ಮರಕ್ಕೆ ನಾಣ್ಯಗಳನ್ನು ಅಂಟಿಸುತ್ತಾರೆ. ಈ ಸಂಪ್ರದಾಯವು ತುಂಬಾ ದಿನಗಳಿಂದ ನಡೆದುಕೊಂಡು ಬಂದಿದೆ. ಈಗ ವಿಷಯ ಏನೆಂದರೆ ನಾಣ್ಯಗಳನ್ನು ಅಂಟಿಸಲು ಜಾಗವೇ ಉಳಿದಿಲ್ಲ. ಹೀಗಾಗಿ ಈ ಪರಿಸರದಲ್ಲಿನ ಮರಗಳಿಗೂ ಭಕ್ತರು ನಾಣ್ಯಗಳನ್ನು ಅಂಟಿಸುತ್ತಿದ್ದಾರೆ.
ಈ ನಾಣ್ಯಗಳ ಮರ ಇರುವುದು ಎಲ್ಲಿದೆ?: ‘ನಾಣ್ಯಗಳ ಮರ’ ಅಥವಾ ‘ಹಣದ ಮರ’ವನ್ನು ನೋಡಲು ಬಿಹಾರದ ನಳಂದದಲ್ಲಿರುವ ರಾಜಗೀರ್ಗೆ ಪ್ರಯಾಣಿಸಬೇಕಾಗುತ್ತದೆ. ರತ್ನಗಿರಿ ಬೆಟ್ಟಗಳಲ್ಲಿರುವ ವಿಶ್ವ ಶಾಂತಿ ಸ್ತೂಪದ ಬಳಿ ಈ ವಿಶೇಷ ಮರ ಇದೆ. ಈ ಮರ ಜನರ ನಂಬಿಕೆಯ ಕೇಂದ್ರವಾಗಿ ಉಳಿದಿದೆ. ವಾಸ್ತವವಾಗಿ ಬಹೇದ ಮರವು ಬೌದ್ಧ ದೇವಾಲಯದ ಬಳಿ ಇರುವುದು ವಿಶೇಷ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಅದ್ಭುತ ದೃಶ್ಯ: ಭಗವಾನ್ ಬುದ್ಧನ ದರ್ಶನ ಪಡೆದ ಬಳಿಕ ಭಕ್ತರು ಜಪಾನಿನ ಬೌದ್ಧ ದೇವಾಲಯದ ಬಳಿ ಇರುವ ಬಹೇದ ಮರದ ಸಮೀಪ ಬರುತ್ತಾರೆ. ಇಲ್ಲಿ ಮರಕ್ಕೆ ನಾಣ್ಯಗಳನ್ನು ಅಂಟಿಸುವ ಮೂಲಕ ಪ್ರದಕ್ಷಿಣೆ ಹಾಕುತ್ತಾರೆ. ಇಲ್ಲಿಗೆ ಬರುವ ಬಹುತೇಕ ಭಕ್ತರು ಈ ಮರಕ್ಕೆ ನಾಣ್ಯಗಳನ್ನು ಅಂಟಿಸುತ್ತಾರೆ. ಹೀಗಾಗಿ ಮರ ಪ್ರಸ್ತುತ ನಾಣ್ಯಗಳಿಂದ ತುಂಬಿದ್ದು, ಹೊಸ ನಾಣ್ಯಗಳನ್ನು ಅಂಟಿಸಲು ಜಾಗ ಇಲ್ಲದಂತಾಗಿದೆ.ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ, ಸೂರ್ಯನ ಕಿರಣಗಳು ಮರದ ಮೇಲೆ ಬೀಳುವುದರಿಂದ ನಾಣ್ಯಗಳು ಎಷ್ಟು ಪ್ರಕಾಶಮಾನವಾಗಿ ಹೊಳೆಯುತ್ತವೆ ಎಂದರೆ ಬಹೇದ್ ಮರದ ಕಾಂಡವು ಸ್ವತಃ ಹೊಳೆಯುತ್ತಿರುವಂತೆ ಭಾಸವಾಗುತ್ತದೆ.
ಈ ದೃಶ್ಯವನ್ನು ನೋಡಲೆಂದೇ ಬಹಳಷ್ಟು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ರಾಜಗೀರ್ನ ಪ್ರಸಿದ್ಧ ವಿಶ್ವ ಶಾಂತಿ ಸ್ತೂಪದ ಬಳಿ ಇರುವ ರತ್ನಗಿರಿ ಪರ್ವತಕ್ಕೆ ಭೇಟಿ ನೀಡಿತು. ಆಗ ಈ ದೃಶ್ಯವು ಅದ್ಭುತವಾಗಿದ್ದನ್ನು ಸ್ವತಃ ಕಣ್ತುಂಬಿಕೊಂಡಿತು. ಒಂದು, ಎರಡು, ಐದು ಮತ್ತು ಹತ್ತು ರೂಪಾಯಿ ನಾಣ್ಯಗಳ ಸಾವಿರಾರು ನಾಣ್ಯಗಳನ್ನು ಈ ಮರಕ್ಕೆ ಅಂಟಿಸಲಾಗಿದೆ. ಮರದಲ್ಲಿ ನಾಣ್ಯಗಳನ್ನು ಹೂಳುವ ಪ್ರೇಮಿಗಳು: ಕಳೆದ ಕೆಲವು ವರ್ಷಗಳಿಂದ ದಂಪತಿಗಳು, ಯುವ ಪ್ರೇಮಿಗಳು ಇಲ್ಲಿ ನಾಣ್ಯವನ್ನು ಅಂಟಿಸುತ್ತಾರೆ. ಹೀಗೆ ಮಾಡುವುದರಿಂದ ಅವರ ಆಸೆಗಳು ಈಡೇರುತ್ತವೆ ಎನ್ನುವ ನಂಬಿಕೆ ಅವರದ್ದು. ಅಷ್ಟೇ ಅಲ್ಲ ಅವರ ಜೀವನವು ಯಶಸ್ವಿಯಾಗುತ್ತದೆ ಎಂಬುದು ಬಹುತೇಕರ ಅನಿಸಿಕೆ. ಪ್ರವಾಸಿಗರು ವಿಶೇಷವಾಗಿ ದಂಪತಿಗಳು ತಮ್ಮ ಆಸೆಗಳನ್ನು ಪೂರೈಸಲು ಮರದ ಕಾಂಡಗಳಲ್ಲಿ ನಾಣ್ಯಗಳನ್ನು ಹಾಕುತ್ತಾರೆ ಅಂತಾರೆ ಬಿಎಂಪಿ ಸೈನಿಕ ಲಲ್ಲು ಪ್ರಸಾದ್.
